ಗೋಣಿಕೊಪ್ಪಲು, ಜು. 31: ಕಿರುಗೂರು,ಬಾಳಾಜಿ,ಹೆಬ್ಬಾಲೆ,ಹಾಗೂ ಅರುವತ್ತೊಕ್ಲು ಗ್ರಾಮಗಳಲ್ಲಿ ಕಾಡಾನೆ ಗಳು ಬೀಡುಬಿಟ್ಟಿದ್ದು ಇವುಗಳನ್ನು ಅರಣ್ಯಕ್ಕೆ ಅಟ್ಟುವ ಕಾರ್ಯಾಚರಣೆ ತಾ. 1 ರಂದು (ಇಂದು) ಮುಂಜಾನೆಯಿಂದ ತಿತಿಮತಿ ಅರಣ್ಯ ಸಿಬ್ಬಂದಿಗಳು ಹಾಗೂ ಪೊನ್ನಂಪೇಟೆ ವಲಯ ಅರಣ್ಯ ಸಿಬ್ಬಂದಿಗಳಿಂದ ಜಂಟಿಯಾಗಿ ನಡೆಯಲಿದೆ.

ಪಂಚಾಯತಿ ವ್ಯಾಪ್ತಿಯ ಗ್ರಾಮಸ್ಥರು, ರೈತರು, ಬೆಳೆಗಾರರು, ಶಾಲಾ ವಿದ್ಯಾರ್ಥಿಗಳು ಎಚ್ಚರಿಕೆ ವಹಿಸಬೇಕು, ಅರಣ್ಯ ಇಲಾಖೆಗೆ ಸಹಕಾರ ನೀಡಬೇಕೆಂದು ಪೊನ್ನಂಪೇಟೆ ಅರಣ್ಯ ಇಲಾಖೆಯ ಆರ್.ಎಫ್.ಓ. ಗಂಗಾಧರ್ ಪ್ರಕಟಣೆಯಲ್ಲಿ ಕೋರಿದ್ದಾರೆ.