ಸೋಮವಾರಪೇಟೆ, ಜು. 19: ಇಲ್ಲಿನ ಸೋಮೇಶ್ವರ ದೇವಾಲಯದಲ್ಲಿ ಆಷಾಢ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯಂದು ಗುರು ಪೂರ್ಣಿಮೆ ನಡೆಯಿತು.

ದೇವಾಲಯದ ಪ್ರಧಾನ ಅರ್ಚಕ ಪ್ರಸನ್ನ ಭಟ್, ಗುರುವು ನಿಷ್ಕಲ್ಮಶ ಭಾವದಿಂದ ಜ್ಞಾನವನ್ನು ಧಾರೆ ಎರೆಯಬೇಕು ಎಂದರು. ದೇವಾಲಯದ ಅಧ್ಯಕ್ಷ ಎಸ್.ಆರ್. ಶ್ರೀನಿವಾಸ್, ಕಾರ್ಯದರ್ಶಿ ವಿಜೇತ್, ಖಜಾಂಚಿ ಎಸ್.ಎನ್. ಶ್ಯಾಮ್ ಸುಂದರ್, ಮಾತಾ ಬಳಗದ ಅಧ್ಯಕ್ಷೆ ಪಂಕಜಾ ಶ್ಯಾಮ್ ಸುಂದರ್, ಗಾಯತ್ರಿ ದಾಮೋದರ್ ಸೇರಿದಂತೆ ನೂರಾರು ಮಂದಿ ಭಾಗಿಯಾಗಿದ್ದರು.