ಗೋಣಿಕೊಪ್ಪಲು, ಜು. 18: ಕಳೆದ ವರ್ಷದ ಮಳೆಯಿಂದ ಉಂಟಾಗಿದ್ದ ಪ್ರವಾಹದಲ್ಲಿ ಮನೆಕಳೆದುಕೊಂಡು ನಿರಾಶ್ರಿತರಾಗಿದ್ದ ಸೋಮವಾರಪೇಟೆಯ ಶಿರಂಗಳ್ಳಿ ಗ್ರಾಮದ ಯು.ಎಂ. ಐಶ್ವರ್ಯ ಎಂಬ ವಿದ್ಯಾರ್ಥಿನಿಯು ಗೋಣಿಕೊಪ್ಪಲು ಕಾವೇರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿ.ಯು.ಸಿ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದು. ಈ ವಿದ್ಯಾರ್ಥಿನಿಯ ಪ್ರಸ್ತುತ ವರ್ಷದ ಕಾಲೇಜು ಶುಲ್ಕ ಹಾಗೂ ವಿದ್ಯಾರ್ಥಿನಿಲಯದ ಶುಲ್ಕವನ್ನು ಕೋಣನಕಟ್ಟೆ ಗ್ರಾಮದ ಕಲ್ಚರಲ್ ಅಂಡ್ ರಿಕ್ರಿಯೇಷನ್ ಅಸೋಸಿಯೇಷನ್ ಮತ್ತು ವಿಲೇಜ್ ಡೆವಲಪ್ ಮೆಂಟ್ ಫಂಡ್ ಕೋಣನಕಟ್ಟೆ ಇವರು ಚೆಕ್ ನೀಡುವ ಮೂಲಕ ಪಾವತಿಸಿದರು. ಈಕೆಯ ವಿದ್ಯಾಭ್ಯಾಸಕ್ಕೆ ಶುಲ್ಕ ಕಟ್ಟಿ ಸಹಾಯ ಮಾಡುವದರ ಜೊತೆಗೆ ವಿದ್ಯಾರ್ಥಿನಿಯು ಅಥ್ಲೆಟಿಕ್ಸ್‍ನಲ್ಲಿ ಆಸಕ್ತಿ ಹೊಂದಿರುವ ಕಾರಣ ಅಥ್ಲೆಟಿಕ್ಸ್‍ನಲ್ಲಿ ಸಾಧನೆ ಮಾಡಲು ಸಹಾಯ ಮಾಡುವದಾಗಿಯೂ ತಿಳಿಸಿದರು.

ಕಾವೇರಿ ಕಾಲೇಜಿನಲ್ಲೇ ವಿದ್ಯಾರ್ಥಿನಿ ತನ್ನ ವಿದ್ಯಾಭ್ಯಾಸವನ್ನು ಮುಂದುವರೆಸಿಕೊಂಡು ಹೋಗುವದಾದರೆ ಮುಂದೆಯೂ ಸಹಾಯ ಮಾಡುವದಾಗಿ ತಿಳಿಸಿದರು. ಈ ಸಂದರ್ಭ ಕಲ್ಚರಲ್ ಅಂಡ್ ರಿಕ್ರಿಯೇಷನ್ ಅಸೋಸಿಯೇಷನ್ ಅಧ್ಯಕ್ಷ ಅಜ್ಜಿನಿಕಂಡ ಬಿ. ತಮ್ಮಯ್ಯ, ಕಾರ್ಯದರ್ಶಿ ಪಾರುವಂಗಡ ಜಿ ಅಪ್ಪಚ್ಚು, ನಿದೆರ್Éೀಶಕರಾದ ಪುಚ್ಚಿಮಾಡ ಟಿ. ಸುಬ್ಬಯ್ಯ, ಪುಚ್ಚಿಮಾಡ ಟಿ.ಅಪ್ಪಚ್ಚು, ಪುಚ್ಚಿಮಾಡ ಬಿ. ಕಿಶೋರ್ ಬೋಪಯ್ಯ, ಚಕ್ಕೆರ ಮಧು ಕುಶಾಲಪ್ಪ, ಪ್ರಾಂಶುಪಾಲ ಎಸ್.ಎಸ್. ಮಾದಯ್ಯ ಹಾಗೂ ಕಾವೇರಿ ಕಾಲೇಜು ಹಳೇ ವಿದ್ಯಾರ್ಥಿ ಸಂಘದ ಸಂಚಾಲಕಿ ಎಸ್.ಎಂ.ರಜನಿ ಹಾಜರಿದ್ದರು.