ಗೋಣಿಕೊಪ್ಪಲು, ಜು. 16: ಮೂಲಭೂತ ಸೌಕರ್ಯದಿಂದ ಸಂಪೂರ್ಣವಾಗಿ ವಂಚಿತ ಗೊಂಡಿರುವ ಆದಿವಾಸಿಗಳ ಬದುಕಿಗೆ ಆಸರೆಯಾಗಲು ಅನೇಕ ಯೋಜನೆಗಳನ್ನು ಸರ್ಕಾರ ಮಟ್ಟದಲ್ಲಿ ಚರ್ಚಿಸಿ ಟ್ರಸ್ಟ್,ವೇದಿಕೆ ವತಿಯಿಂದ ಹಂತ ಹಂತವಾಗಿ ಕಾರ್ಯಕ್ರಮ ರೂಪಿಸುವ ಮೂಲಕ ಆದಿವಾಸಿಗಳ ಸಂಕಷ್ಟದಲ್ಲಿ ಭಾಗಿಗಳಾಗುತ್ತೇವೆಂದು ಬೆಂಗಳೂರಿನ ಕರುನಾಡ ಸೇನಾನಿಗಳ ವೇದಿಕೆಯ ರಾಜ್ಯಾಧ್ಯಕ್ಷ ಎಲ್. ಸೂಂiÀರ್iನಾರಾಯಣ ಅವರು ಅಭಿಪ್ರಾಯಪಟ್ಟರು.

ಪೊನ್ನಂಪೇಟೆ ಹೋಬಳಿಯ ಅರುವತೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಟ್ಟುವಿನಲ್ಲಿ ನೆಲೆಸಿರುವ 60ಕ್ಕೂ ಅಧಿಕ ಆದಿವಾಸಿಗಳ ಕುಟುಂಬದ ವಿದ್ಯಾರ್ಥಿ ಗಳಿಗೆ ಉಗಮ ಚೇತನ ಟ್ರಸ್ಟ್ ಹಾಗೂ ಕರುನಾಡ ಸೇನಾನಿಗಳ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಬ್ಯಾಗ್ ಹಾಗೂ ನೋಟ್ ಪುಸ್ತಕ ವಿತರಿಸಿ ಮಾತ ನಾಡಿದ ಅವರು ಕೊಡಗು ಜಿಲ್ಲೆಯಲ್ಲಿ ಎಲ್ಲರೂ ಸಮೃದ್ಧವಾಗಿದ್ದಾರೆ ಎಂದು ನಾವು ಕೇಳಿದ್ದೆವು. ಆದರೆ ಹಳ್ಳಿಗಟ್ಟುವಿನಲ್ಲಿ ವಾಸವಿರುವ ಆದಿವಾಸಿಗಳ ಬದುಕು ನರಕವಾಗಿದೆ. ಸ್ವಾತಂತ್ರ್ಯ ಬಂದು ವರ್ಷಗಳೇ ಉರುಳಿದರೂ ಇಲ್ಲಿಗೆ ಕನಿಷ್ಟ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ವಿದ್ಯುಚ್ಛಕಿ,್ತ ಮನೆ, ರಸ್ತೆ, ಇವುಗಳನ್ನೇ ನೀಡಿಲ್ಲ, ಇಲ್ಲಿಯ ಜನಪ್ರತಿನಿಧಿಗಳ ನಿರ್ಲಕ್ಷ್ಯವೇ ಇದಕ್ಕೆ ಮುಖ್ಯ ಕಾರಣ. ಮುಂದೆ ವೇದಿಕೆ ವತಿಯಿಂದ ದೊಡ್ಡಮಟ್ಟದಲ್ಲಿ ಹೋರಾಟ ನಡೆಸುವ ಮೂಲಕ ಆದಿವಾಸಿಗಳ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.

ಉಗಮ ಟ್ರಸ್ಟ್‍ನ ಅಧ್ಯಕ್ಷ ಪ್ರಿಯಾರಮೇಶ್ ಮಾತನಾಡಿ ಈ ಭಾಗದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಹತ್ತಿರದಿಂದ ನೋಡಿದ್ದೇವೆ. ಇಲ್ಲಿಯ ಮಹಿಳೆಯರಿಗೆ ಉದ್ಯೋಗವಕಾಶ ನೀಡಲು ಟ್ರಸ್ಟ್ ವತಿಯಿಂದ ಹೊಲಿಗೆ ತರಬೇತಿ ನೀಡುವದು ಸೇರಿದಂತೆ ಅವಿದ್ಯಾವಂತ ಯುವಕರಿಗೆ ಉದ್ಯೋಗ

(ಮೊದಲ ಪುಟದಿಂದ) ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸುವದು. ಆದಿವಾಸಿಗಳ ಅನುಕೂಲಕ್ಕಾಗಿ ಶೌಚಾಲಯ ನಿರ್ಮಾಣ, ಸ್ವಸಹಾಯ ಸಂಘಗಳ ಮೂಲಕ ಆರ್ಥಿಕ ಅಭಿವೃದ್ಧಿ, ಅನಕ್ಷರತೆ ಹೊಂದಿರು ವವರಿಗೆ ಶಿಕ್ಷಣ ನೀಡುವ ಕಾರ್ಯಕ್ರಮಗಳನ್ನು ಹಂತ ಹಂತವಾಗಿ ಹಮ್ಮಿಕೊಳ್ಳಲಾಗುವದು. ಇಲ್ಲಿಯ ಸಮಸ್ಯೆಗಳ ಬಗ್ಗೆ ವಿವಿಧ ಪ್ರಗತಿಪರ ಹೋರಾಟಗಾರರ ಸಹಾಯ ಪಡೆದು ಮೂಲಭೂತ ಸೌಕರ್ಯ ಗಳಿಂದ ವಂಚಿತರಾಗಿರುವ ಆದಿವಾಸಿಗಳ ಬದುಕಿಗೆ ಹೋರಾಟ ನಡೆಸಲಾಗುವದು ಎಂದರು.

ಉಗಮ ಚೇತನ ಟ್ರಸ್ಟ್‍ನ ಉಪಾಧ್ಯಕ್ಷೆ ರೇವತಿ ಮಾತನಾಡಿ ಈ ಭಾಗದಿಂದ ಆರಿಸಿ ಹೋಗಿರುವ ಸಂಸದರಾದ ಪ್ರತಾಪ್‍ಸಿಂಹ ಸ್ಥಳಕ್ಕೆ ಭೇಟಿ ನೀಡಬೇಕು. ಇಲ್ಲಿಯ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಬೇಕು ಆ ಮೂಲಕ ಆದಿವಾಸಿಗಳ ಬದುಕಿಗೆ ಆಸರೆಯಾಗ ಬೇಕು. ಈ ನಿಟ್ಟಿನಲ್ಲಿ ಸಂಸದರನ್ನು ಭೇಟಿಯಾಗಿ ಸ್ಥಳಕ್ಕೆ ಕರೆ ತರುವ ಪ್ರಯತ್ನ ಮಾಡಲಾಗುವದೆಂದರು.

ಬಹುಜನ ಕಾರ್ಮಿಕರ ಸಂಘಟನೆಯ ಅಧ್ಯಕ್ಷ ಮೊಣ್ಣಪ್ಪ ಮಾತನಾಡಿ ಕಳೆದ 5 ವರ್ಷಗಳಿಂದ ಈ ಭಾಗದಲ್ಲಿ ಆದಿವಾಸಿಗಳು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಪಡಿತರ ಚೀಟಿ, ಆಧಾರ್ ಕಾರ್ಡ್, ಮತದಾರರ ಚೀಟಿ ಪಡೆದಿದ್ದರೂ, ಇವರಿಗೆ ಯಾವದೇ ಸವಲತ್ತುಗಳು ದೊರೆತಿಲ್ಲ. ದಿನನಿತ್ಯ ಕೂಲಿ ಕೆಲಸದಲ್ಲಿ ಉಳಿಕೆ ಮಾಡಿರುವ ಹಣದಿಂದ ಶೆಡ್‍ಗಳನ್ನು ನಿರ್ಮಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಹೋರಾಟ ಹಮ್ಮಿಕೊಂಡಾಗ ಸಮಾನ ಮನಸ್ಕರು ಹೋರಾಟಕ್ಕೆ ಬೆಂಬಲ ನೀಡಬೇಕೆಂದು ಮನವಿ ಮಾಡಿದರು. ಆದಿವಾಸಿಗಳ ಸಂಕಷ್ಟದಲ್ಲಿ ತನ್ನನ್ನು ತೊಡಗಿಸಿಕೊಂಡು ಇವರ ಬದುಕಿಗೆ ಆಸರೆಯಾಗುತ್ತಿರುವ ಹೇಮಂತ್ ಸುಖ್‍ದೇವ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಕರುನಾಡ ಸೇನಾನಿಗಳ ವೇದಿಕೆಯ ಉಪಾಧ್ಯಕ್ಷ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಕೆ.ಮೋಹನ್ ಕುಮಾರ್, ಸಂಘಟನಾ ಕಾರ್ಯದರ್ಶಿ ವೈ.ಎಂ .ಮಂಜುನಾಥ್, ವಿಜಿ ಕುಮಾರ್, ಉಗಮ ಟ್ರಸ್ಟ್‍ನ ಕಾರ್ಯದರ್ಶಿ ಮಂಜುಳ ರುದ್ರೇಗೌಡ, ಖಜಾಂಜಿ ನಿಂಗರಾಜು, ಡಾ. ಮೂರ್ತಿ, ಬಹುಜನ ಕಾರ್ಮಿಕರ ಸಂಘಟನೆಯ ತಾಯಮ್ಮ, ವಸಂತ್, ಮುಂತಾದವರು ಹಾಜರಿದ್ದರು. ಆದಿವಾಸಿಗಳ ವಿದ್ಯಾರ್ಥಿಗಳು ಸಾಂಸ್ಕøತಿಕ ಕಾರ್ಯಕ್ರಮ ನಡೆಸಿಕೊಟ್ಟರು.

-ಹೆಚ್.ಕೆ. ಜಗದೀಶ್