ಸೋಮವಾರಪೇಟೆ, ಜೂ. 11: ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ತಾಲೂಕಿನ ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ದೇವಾಲಯ ಆವರಣದಲ್ಲಿ ಆಯೋಜಿಸಲಾಗಿದ್ದ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಈರ್ವರು ಲೇಖಕರ ಪುಸ್ತಕಗಳನ್ನು ಬಿಡುಗಡೆ ಗೊಳಿಸಲಾಯಿತು.

ಲೇಖಕಿ ಶ.ಗ. ನಯನತಾರ ಅವರು ರಚಿಸಿರುವ ‘ಶನಿವಾರಸಂತೆ ಮತ್ತು ಕೊಡ್ಲಿಪೇಟೆ ಪರಿಸರದ ಸಾಂಸ್ಕøತಿಕ ಸಂಪತ್ತು’ ಕೃತಿ ಮತ್ತು ಸಮ್ಮೇಳನದ ಸರ್ವಾಧ್ಯಕ್ಷ ಡಾ. ಹೆಬ್ಬಾಲೆ ಕೆ. ನಾಗೇಶ್ ಅವರು ರಚಿಸಿರುವ ‘ಕೊಡವರ ಸಾಂಸ್ಕøತಿಕ ಪದಕೋಶ ಮತ್ತು ಮೌಖಿಕ ಸಂಸ್ಕøತಿ, ‘ಮುಕ್ತ ಸಂಸ್ಕøತಿ ಮತ್ತು ಹಂಪಿ ಪರಿಸರ’ ಪುಸ್ತಕಗಳನ್ನು ಶಾಂತಳ್ಳಿ ಗ್ರಾ.ಪಂ. ಅಧ್ಯಕ್ಷ ಬಗ್ಗನ ಅನಿಲ್ ಕುಮಾರ್ ಬಿಡುಗಡೆಗೊಳಿಸಿದರು.

ಮನ ಸೆಳೆದ ಸಾಂಸ್ಕøತಿಕ ಕಾರ್ಯಕ್ರಮ: ಸಮ್ಮೇಳನದ ಸಭಾ ಕಾರ್ಯಕ್ರಮದ ನಡುವೆ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಮೂಡಿಬಂದ ಸಾಂಸ್ಕøತಿಕ ಕಾರ್ಯಕ್ರಮ ಜನಮನ ಸೂರೆಗೊಂಡಿತು. ಇದರೊಂದಿಗೆ ಗ್ರಾಮೀಣ ಸೊಗಡಿನ ಕಲೆಗಳಲ್ಲಿ ಒಂದಾದ ಸುಗ್ಗಿಕುಣಿತವನ್ನು ತೋಳೂರು ಶೆಟ್ಟಳ್ಳಿಯ ಕುಟ್ಟಪ್ಪ ಮತ್ತು ಮಾಚಯ್ಯ ತಂಡ ಪ್ರಸ್ತುತ ಪಡಿಸಿ ಎಲ್ಲರ ಗಮನ ಸೆಳೆದರು.