ಶನಿವಾರಸಂತೆ, ಜೂ. 4: ಸಮೀಪದ ಕೊಡ್ಲಿಪೇಟೆಯ ನಾಮದೇವ ಸಿಂಪಿ ಸಮಾಜ ಹಾಗೂ ಶ್ರೀ ರುಕ್ಮಿಣಿ ಪಾಂಡುರಂಗ ಸೇವಾ ಸಮಿತಿ ವತಿಯಿಂದ ಶ್ರೀ ರುಕ್ಮಿಣಿ ಪಾಂಡುರಂಗ ದೇವಸ್ಥಾನ ಕಲಶ ಪ್ರತಿಷ್ಠಾಪನೆ ಮತ್ತು ಜೀರ್ಣೋದ್ಧಾರ ಕಾರ್ಯಕ್ರಮ ತಾ. 5 (ಇಂದು) ಮತ್ತು 6 ರಂದು ನಡೆಯಲಿದೆ.
ತಾ. 5 ರಂದು ಸಂಜೆ 3 ಗಂಟೆಯಿಂದ ಪೋತಿ ಸ್ಥಾಪನೆ, ಜ್ಞಾನೇಶ್ವರಿ ಪಾರಾಯಣ, ಭಜನೆ ಮತ್ತು ಕೀರ್ತನೆಗಳು ನಡೆಯುತ್ತವೆ. 5 ಗಂಟೆಯಿಂದ ಪ್ರಾರ್ಥನೆ, ಸ್ಥಳ ಶುದ್ಧೀ, ಸುದರ್ಶನ ಹೋಮ, ವಾಸ್ತು ಹೋಮ, ವಾಸ್ತುಬಲಿ, ದಿಕ್ಪಾಲಬಲಿ ರಕ್ಷೆ ಪೂಜಾ ಕಾರ್ಯಕ್ರಮ ನಡೆಯುತ್ತದೆ. ತಾ. 6 ರಂದು ಬೆಳಿಗ್ಗೆ 5 ಗಂಟೆಗೆ ಕಾಕಾಡಾರತಿ, 6 ಗಂಟೆಯಿಂದ ಗಂಗಾಪೂಜೆ, ಕೊಡ್ಲಿಪೇಟೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮಂಗಳವಾದ್ಯದೊಂದಿಗೆ ಕುಂಭ ಮೆರವಣಿಗೆ, 6.30 ರಿಂದ ಗಣಪತಿ ಹೋಮ, ಪ್ರತಿಷ್ಠಾಹೋಮ, 8.40ಕ್ಕೆ ಶ್ರೀದೇವರ ಪುನಃಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಮಧ್ಯಾಹ್ನ 12 ರಿಂದ ಮಹಾಪೂಜೆ, ಮಹಾಮಂಗಳಾರತಿ ನಂತರ ಮಹಾಪ್ರಸಾದ ವಿನಿಯೋಗ ನಡೆಯಲಿದೆ.
ಪೂಜಾ ಕೈಂಕರ್ಯಗಳು ಪುತ್ತೂರು ತಾಲೂಕು ಕೆಮ್ಮಿಂಜೆ ವೇದಮೂರ್ತಿ ಬ್ರಹ್ಮಶ್ರೀ ತಂತ್ರಿ ಸುಬ್ರಮಣ್ಯ ಬಳ್ಳಕ್ಕುರಾಯ ನೇತೃತ್ವದಲ್ಲಿ ಜರುಗುವದು. ಉತ್ಸವದ ಪ್ರಯುಕ್ತ ತಾ. 6 ರಂದು ಭವನ ಮೆರವಣಿಗೆ ಹಾಗೂ ಹಾಸನದ ಕೆ.ಎಸ್. ಶೇಷಗಿರಿರಾವ್ ಮತ್ತು ಸಂಗಡಿಗರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ ಎಂದು ಸೇವಾ ಸಮಿತಿ ಅಧ್ಯಕ್ಷ ಡಿ. ಮೋಹನ್ ಕುಮಾರ್ ಕೋಳೆಕರ್, ಉಪಾಧ್ಯಕ್ಷ ಕೆ.ಎಸ್. ವಾಸುದೇವರಾವ್ ಕೋಳೆಕರ್ ಹಾಗೂ ಕಾರ್ಯದರ್ಶಿ ಜಿ.ಆರ್. ಕಾಂತರಾಜ್ ಗುಜರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.