ಶನಿವಾರಸಂತೆ, ಮೇ 20: ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿಯ 3ನೇ ವಿಭಾಗ ಮಾದ್ರೆ ಗ್ರಾಮದ ಸದಸ್ಯರಾಗಿದ್ದ ಎಂ.ಆರ್. ಸಂದೇಶ್ ನಿಧನದ ಹಿನ್ನೆಲೆ ತೆರವಾಗಿದ್ದ ಒಂದು ಸ್ಥಾನಕ್ಕೆ ಎಂ.ಟಿ. ರಂಗರಾಜ್ ಹಾಗೂ ಪೂರ್ಣಚಂದ್ರ ನಾಮಪತ್ರ ಸಲ್ಲಿಸಿದ್ದರು.

ಸೋಮವಾರ ನಾಮಪತ್ರ ಹಿಂದೆ ತೆಗೆಯಲು ಕೊನೆ ದಿನವಾಗಿದ್ದು, ಅಭ್ಯರ್ಥಿ ಪೂರ್ಣಚಂದ್ರ ನಾಮಪತ್ರ ವಾಪಸ್ ಪಡೆದಿದ್ದಾರೆ. ತಾ. 29ರಂದು ಚುನಾವಣೆ ನಡೆಯಬೇಕಿತ್ತು. ಇದೀಗ ಕಣದಲ್ಲಿ ಉಳಿದಿರುವ ಏಕೈಕ ಅಭ್ಯರ್ಥಿ ಎಂ.ಟಿ. ರಂಗರಾಜ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.