ಮಡಿಕೇರಿ, ಮೇ 5: ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‍ನ ಪ್ರಸ್ತುತ ಆಡಳಿತ ಮಂಡಳಿ ಚುನಾವಣೆಯಲ್ಲಿ ನಿರ್ದೇಶಕರಾಗಿ ಆಯ್ಕೆಯಾದ ಮಡಿಕೇರಿ ಪಟ್ಟಣ ಸಹಕಾರ ಬ್ಯಾಂಕ್‍ನ ನಿರ್ದೇಶಕರಾದ ಕನ್ನಂಡ ಎ. ಸಂಪತ್ ಅವರನ್ನು ಟೌನ್ ಬ್ಯಾಂಕ್ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭ ಬ್ಯಾಂಕ್‍ನ ಅಧ್ಯಕ್ಷ ಸಿ.ಕೆ. ಬಾಲಕೃಷ್ಣ, ಉಪಾಧ್ಯಕ್ಷ ಬಿ.ಎಂ. ರಾಜೇಶ್ ಹಾಗೂ ನಿರ್ದೇಶಕರು ಗಳಾದ ಕೋಡಿ ಚಂದ್ರಶೇಖರ್, ಬಿ. ರಾಜೇಶ್ ಯಲ್ಲಪ್ಪ, ಬಿ.ಕೆ. ಜಗದೀಶ್, ಜಿ.ಎಂ. ಸತೀಶ್ ಪೈ, ಎಸ್.ಸಿ. ಸತೀಶ್, ಕಾವೇರಮ್ಮ ಸೋಮಣ್ಣ, ಬಿ.ಪಿ. ಮಾಚಮ್ಮ, ಆರ್. ಗಿರೀಶ್, ಬಿ.ವಿ. ರೋಷನ್, ಕೆ.ಆರ್. ನಾಗೇಶ್, ಸುಮಂತ್ ಪಾಲಾಕ್ಷ ಮತ್ತು ಎ. ಗೋಪಾಲಕೃಷ್ಣ, ವ್ಯವಸ್ಥಾಪಕ ಕೆ. ಪದ್ಮನಾಭ ಕಿಣಿ ಹಾಗೂ ಸಿಬ್ಬಂದಿ ಹಾಜರಿದ್ದರು.