ಕುಶಾಲನಗರ, ಏ. 18: ಕುಶಾಲನಗರ ಸಮೀಪ ಹಾರಂಗಿ ರಸ್ತೆಯ ನಿವಾಸಿ ಮಹೇಶ್ ಎಂಬವರ ಮನೆಗೆ ಸಿಡಿಲು ಬಡಿದು ಮನೆಯ ಗೋಡೆಗೆ ಹಾನಿಯಾಗಿದೆ. ಸಂಜೆ ಭಾರಿ ಮಳೆ ನಡುವೆ ಸಿಡಿಲು ಹೊಡೆದ ಹಿನ್ನಲೆಯಲ್ಲಿ ಮನೆಯ ಶೀಟ್‍ಗಳು ಹಾನಿಯಾಗಿವೆ. ಅದೃಷ್ಟವಶಾತ್ ಮನೆಯ ಕುಟುಂಬ ಸದಸ್ಯರಿಗೆ ಯಾವದೇ ರೀತಿಯ ಅಪಾಯ ಉಂಟಾಗಿಲ್ಲ.