ಕೂಡಿಗೆ, ಏ. 3: ಭಾರತೀಯ ಜನತಾ ಪಕ್ಷದ ಕೂಡಿಗೆ, ಕೂಡುಮಂಗಳೂರು ಮಹಿಳಾ ಶಕ್ತಿ ಕೇಂದ್ರದ ಪದಾಧಿಕಾರಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಕೂಡಿಗೆ, ಬಸವನತ್ತೂರು, ಕೂಡಿಗೆ ಕ್ಯಾಂಪಸ್ ವ್ಯಾಪ್ತಿಗಳ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು.

ಕೊಡಗು-ಮೈಸೂರು ಕ್ಷೇತ್ರದ ಅಭ್ಯರ್ಥಿ ಪ್ರತಾಪ್‍ಸಿಂಹ ಅವರ ಪರ ಮತಯಾಚನೆ ಮಾಡಿ, ಮತ್ತೊಮ್ಮೆ ಮೋದಿ ಎಂಬ ಘೋಷಣೆಯೊಂದಿಗೆ ಕರಪತ್ರಗಳನ್ನು ಹಂಚಲಾಯಿತು. ಕೂಡಿಗೆ ಶಕ್ತಿ ಕೇಂದ್ರ ಅಧ್ಯಕ್ಷೆ ಸಾವಿತ್ರಿರಾಜು, ಕೂಡುಮಂಗಳೂರು ಗ್ರಾಮ ಪಂಚಾಯಿತಿ ಸದಸ್ಯೆ ಜ್ಯೋತಿ, ಮಹಿಳಾ ಶಕ್ತಿ ಕೇಂದ್ರದ ಪ್ರಮುಖರಾದ ಕೆ. ಕನಕ, ನಿರ್ಮಲಾ, ಸುಶೀಲಾ, ಸಾವಿತ್ರಿ, ವಾಣಿ, ಜಮುನಾ, ಸವಿತ ಅಪ್ಪಣ್ಣ ಮತ್ತಿತರರು ಮತಯಾಚನೆಯಲ್ಲಿ ತೊಡಗಿದ್ದರು.