ಮೂರ್ನಾಡು, ಫೆ. 27: ಬಡತನ ರೇಖೆ ಕೆಳಗಿರುವ ಕುಟುಂಬಗಳಿಗೆ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಉಚಿತ ಅನಿಲ ಕಿಟ್ ವಿತರಣಾ ಸಮಾರಂಭ ನಡೆಯಿತು.

ಮೂರ್ನಾಡು ಗೌಡ ಸಮಾಜದಲ್ಲಿ ಆಯೋಜಿಸಲಾದ ಸಮಾರಂಭದಲ್ಲಿ ಮಡಿಕೇರಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ಫಲಾನುಭವಿಗಳಿಗೆ ಅನಿಲ ಕಿಟ್ ವಿತರಿಸಿದರು. ಸಮಾರಂಭದಲ್ಲಿ 170 ಕುಟುಂಬಗಳಿಗೆ ಅನಿಲ ಕಿಟ್ ವಿತರಿಸಲಾಯಿತು. ಈ ಸಂದರ್ಭ ತಾಲೂಕು ಪಂಚಾಯಿತಿ ಸದಸ್ಯೆ ಶಶಿ ಪ್ರಕಾಶ್, ಕಾಂತೂರು-ಮೂರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಲ್ಲುಮುಟ್ಲು ಜಮುನ, ಉಪಾಧ್ಯಕ್ಷ ಕುಂಞಪ್ಪ ಪವಿತ್ರ, ಪಿಡಿಒ ವೇಣು ಗೋಪಾಲ್, ಗ್ರಾಮ ಪಂಚಾಯಿತಿ ಸದಸ್ಯರು, ಶ್ರೀ ಸುಬ್ರಮಣ್ಯ ಭಾರತ್ ಗ್ಯಾಸ್ ಮಾಲೀಕ ಮಾದಪ್ಪ, ಬೆಲ್ಲು ಸೋಮಯ್ಯ, ಪಳಂಗಂಡ ಅಪ್ಪಣ್ಣ ಇತರರು ಉಪಸ್ಥಿತರಿದ್ದರು.