ಕುಶಾಲನಗರ, ಫೆ. 6: ಕುಶಾಲನಗರ ಕನ್ನಡ ಭಾರತಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿನಿ ಸಿ.ಎಂ. ರಾಶಿ ದೆಹಲಿಯಲ್ಲಿ ನಡೆಯುವ ರಾಷ್ಟ್ರಮಟ್ಟದ ಅಥ್ಲೆಟಿಕ್ಸ್‍ಗೆ ಆಯ್ಕೆಯಾಗಿದ್ದಾಳೆ. ತಾ. 12 ರಿಂದ ಆರಂಭವಾಗುವ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ರಾಶಿ 1500 ಮೀ ಓಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವಳು. ಕೂತಿ ಗ್ರಾಮದ ನಿವಾಸಿ ಸಿ.ಎನ್. ಮಂಜುನಾಥ್ ಪುತ್ರಿಯಾಗಿರುವ ಈಕೆ ಕುಶಾಲನಗರ ಕನ್ನಡ ಭಾರತಿ ಕಾಲೇಜಿನಲ್ಲಿ ಪ್ರಥಮ ಪಿಯು ವ್ಯಾಸಂಗ ಮಾಡುತ್ತಿದ್ದಾಳೆ. ದೈಹಿಕ ತರಬೇತಿ ಉಪನ್ಯಾಸಕ ಚನ್ನಕೇಶವ ಮೂರ್ತಿ ತರಬೇತಿ ನೀಡಿದ್ದಾರೆ.