ಶ್ರೀಮಂಗಲ, ಜ. 29: ಒಂದು ಜನಾಂಗ ಉಳಿಯಲು ಭಾಷೆ ಹಾಗೂ ಸಂಸ್ಕøತಿಯ ಉಳಿಕೆ ಬಹು ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಶಾಲಾ ಮಕ್ಕಳಲ್ಲಿ ಕೊಡವ ಸಂಸ್ಕøತಿ ಮತ್ತು ಜಾನಪದ ಕಲೆಯತ್ತ ಅಭಿಮಾನ ಮೂಡಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವದು ಸ್ವಾಗತಾರ್ಹವಾಗಿದೆ ಎಂದು ಅರುವತೊಕ್ಲುವಿನ ಸರ್ವದೈವತಾ ವಿದ್ಯಾಸಂಸ್ಥೆಯ ಅಧ್ಯಕ್ಷ ಕಾಡ್ಯಮಾಡ ಪ್ರಕಾಶ್ ಮೊಣ್ಣಪ್ಪ ಅಭಿಪ್ರಾಯಪಟ್ಟರು.

ವಿದ್ಯಾಸಂಸ್ಥೆಯಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮತ್ತು ವಿದ್ಯಾಸಂಸ್ಥೆಯ ಆಶ್ರಯದಲ್ಲಿ ನಡೆದ “ಆಟ್-ಪಾಟ್-ಪಡಿಪು” ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ವಿದ್ಯಾಸಂಸ್ಥೆಯ ಪ್ರಾಂಶುಪಾಲೆ ಕಾಡ್ಯಮಾಡ ಲಲಿತ ಮೊಣ್ಣಪ್ಪ ಮಾತನಾಡಿ, ಕೊಡವ ಸಾಹಿತ್ಯ ಅಕಾಡೆಮಿ ಉತ್ತಮ ಕಾರ್ಯಕ್ರಮದ ಮೂಲಕ ಸಾಹಿತ್ಯ, ಜಾನಪದ ಕಲೆ, ಸಂಸ್ಕøತಿ ಬೆಳವಣಿಗೆಗೆ ಕ್ರೀಯಾಶೀಲವಾಗಿ ಕೆಲಸ ಮಾಡುತ್ತಿದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಅಕಾಡೆಮಿ ಅಧ್ಯಕ್ಷ ಪೆಮ್ಮಂಡ ಕೆ. ಪೊನ್ನಪ್ಪ, ಮಕ್ಕಳಲ್ಲಿ ಕೊಡವ ಸಂಸ್ಕøತಿ ಆಚಾರ ವಿಚಾರದ ಬಗ್ಗೆ ಅರಿವು ಹಾಗೂ ಅಭಿಮಾನ ಮೂಡಿಸುವಲ್ಲಿ ಇಂತಹ ಕಲಿಕ ಶಿಬಿರಗಳನ್ನು ಶಾಲೆಗಳಲ್ಲಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಶಾಲಾ ಮುಖ್ಯೋಪಾಧ್ಯಾಯ ಪೊನ್ನಿಮಾಡ ಪ್ರದೀಪ್ ಹಾಜರಿದ್ದರು. ತರಬೇತಿ ಪಡೆದ ಮಕ್ಕಳಿಂದ ಉಮ್ಮತಾಟ್ ಮತ್ತು ಕೋಲಾಟ್ ಪ್ರದರ್ಶನ ನಡೆಯಿತು. ಉಮ್ಮತಾಟ್ ತರಬೇತಿಯನ್ನು ಚಂಗುಲಂಡ ನಿವ್ಯ, ಸ್ವಪ್ನ, ಕೋಲಾಟ್ ತರಬೇತಿಯನ್ನು ಚಂಗುಲಂಡ ಮಧು ಪೆಮ್ಮಯ್ಯ, ಈಶ ಅಯ್ಯಪ್ಪ ನೀಡಿದರು.

ತರಬೇತಿ ಪಡೆದ ಮಕ್ಕಳಿಗೆ ಅಕಾಡೆಮಿ ವತಿಯಿಂದ ಕೊಡವ ಸಾಂಪ್ರದಾಯಿಕ ಉಡುಪು ಹಾಗೂ ಉಮ್ಮತಾಟ್ ತಂಡಕ್ಕೆ 12 ಜೊತೆ ಸೀರೆ, ರವಿಕೆ, ವಸ್ತ್ರ ಮತ್ತು ಕೋಲಾಟ್ ತಂಡಕ್ಕೆ 12 ಜೊತೆ ಕುಪ್ಪಸ, ಚೇಲೆ, ಜೊಪ್ಪೆಕೋಲ್ ವಿತರಿಸಲಾಯಿತು. ವಿದ್ಯಾರ್ಥಿನಿ ವಿ.ಎ. ಕ್ರಿಷ್ಮ ಪ್ರಾರ್ಥಿಸಿ, ಕಾರ್ಯಕ್ರಮದ ಸಂಚಾಲಕ ಅಕಾಡೆಮಿ ಸದಸ್ಯ ಚಂಗುಲಂಡ ಸೂರಜ್ ಸ್ವಾಗತಿಸಿ, ನಾಳಿಯಮ್ಮಂಡ ಉಮೇಶ್ ಕೇಚಮಯ್ಯ ನಿರೂಪಿಸಿ ಬೊಳ್ಳಜಿರ ಬಿ ಅಯ್ಯಪ್ಪ ವಂದಿಸಿದರು. ಅಕಾಡೆಮಿ ಸದಸ್ಯರಾದ ಸುಳ್ಳಿಮಾಡ ಭವಾನಿ ಕಾವೇರಪ್ಪ, ಕುಡಿಯರ ಶಾರದ, ಮನ್ನಕ್ಕಮನೆ ಬಾಲಕೃಷ್ಣ, ಹೆಚ್.ಎ. ಗಣಪತಿ ಹಾಜರಿದ್ದರು.