ಸೋಮವಾರಪೇಟೆ,ಜ. 21: ಇಲ್ಲಿನ ಜಯವೀರ ಮಾತೆ ದೇವಾಲಯದ 2 ನೇ ವರ್ಷದ ವಾರ್ಷಿಕೋತ್ಸವ ತಾ. 22ರಿಂದ (ಇಂದಿನಿಂದ) ತಾ. 25ರವರೆಗೆ ನಡೆಯಲಿದೆ ಎಂದು ದೇವಾಲಯ ಸಮಿತಿ ಪ್ರಕಟಣೆ ತಿಳಿಸಿದೆ.
ತಾ. 22ರಂದು ಸಂಜೆ 5.30ಕ್ಕೆ ಧ್ವಜಾರೋಹಣ, ಪ್ರಾರ್ಥನೆ, ಬಲಿಪೂಜೆ ನಂತರ ಸಿದ್ದಾಪುರದ ಧರ್ಮಕೇಂದ್ರದ ಗುರುಗಳಾದ ಪಿ. ಜೋನಾಸ್ ಅವರಿಂದ ಪ್ರಬೋಧನೆ, ತಾ. 23ರಂದು ಆರ್ಜಿ ಧರ್ಮಕೇಂದ್ರದ ಗುರುಗಳಾದ ಜಾನ್ ಪೀಟರ್ ರೇಗೋ, ತಾ. 24ರಂದು ಮಳವಳ್ಳಿ ಧರ್ಮಕೇಂದ್ರದ ಗುರು ಜೋಸೆಫ್ ಮರಿ ಅವರುಗಳಿಂದ ಪ್ರಬೋಧನೆ ನಡೆಯಲಿದೆ.
ತಾ. 25ರಂದು ಸಂಜೆ 4.30ಕ್ಕೆ ಮೈಸೂರು ಧರ್ಮಕೇಂದ್ರದ ಧರ್ಮಾಧ್ಯಕ್ಷ ಡಾ. ಕೆ.ವಿ. ವಿಲಿಯಂ ಅವರಿಂದ ನೂತನ ಧ್ವಜಸ್ಥಂಭದ ಉದ್ಘಾಟನೆ, ಬಲಿಪೂಜೆ, ಸನ್ಮಾನ ನಡೆಯಲಿದೆ. ನಂತರ ಬೆಳಗುವ ದೀಪಗಳೊಂದಿಗೆ ಪಟ್ಟಣದಲ್ಲಿ ತೇರಿನ ಮೆರವಣಿಗೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.