ಸಿದ್ದಾಪುರ, ಜ. 17: ಶತಮಾನಗಳಿಂದ ಮೂಲಭೂತ ಸೌಕರ್ಯಗಳಿಂದ ವಂಚಿತರಾದ ಗಿರಿಜನ ಹಾಡಿಗಳಿಗೆ ಕೇಂದ್ರ ಸರಕಾರದ ದೀನ ದಯಾಳ್ ಉಪಾಧ್ಯಾಯ ವಿದ್ಯುತ್ ಯೋಜನೆಯಡಿ 64 ಕುಟುಂಬದವರಿಗೆ ‘ಬೆಳಕಿನಭಾಗ್ಯ’ ಲಭಿಸಿದೆ.

ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಿರಿಜನ ಹಾಡಿಗಳಾದ ಕೋಟೆಮಕ್ಕಿ, ಕೆತ್ತಲಿನಕೆರೆ,ಚಿಕ್ಕರೇಷ್ಮೆಹಡ್ಲು,ಚಿನ್ನಹಡ್ಲು ದೈವದ ಹಡ್ಲು ಕಾಲೋನಿಯ ಜನತೆ ‘ದೀಪ’ದ ಬುಡ್ಡಿಯಲ್ಲಿ ಜೀವನ ಸಾಗಿಸುತ್ತಿದ್ದರು.

ಕೇಂದ್ರ ಸರಕಾರ ದೀನದಯಾಳ್ ಉಪಾಧ್ಯಾಯ ವಿದ್ಯುತ್ ಯೋಜನೆಯಡಿ ಈ ಕಾರ್ಯಕ್ರಮ ಯೋಜನೆಯನ್ನು ಅನುಷ್ಠಾನಗೊಳಿಸಿದ್ದು 64 ಕುಟುಂಬದವರಿಗೆ ಬೆಳಕಿನ ಭಾಗ್ಯ ಯೊಜನೆಯನ್ನು ಶಾಸಕ ಕೆ.ಜಿ.ಬೋಪಯ್ಯ ಉದ್ಘಾಟಿಸಿ ಮಾತನಾಡಿ ಸ್ವಾತಂತ್ರ್ಯ ಸಿಕ್ಕಿ 7 ದಶಕಗಳು ಕಳೆದರೂ ಈ ದೇಶವನ್ನು ಆಳಿದ ಬಹುತೇಕ ಸರಕಾರ ಗಿರಿಜನರಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಮುಂದಾಗಲಿಲ್ಲ ಕೇಂದ್ರದ ನರೇಂದ್ರಮೋದಿ ಸರಕಾರ ಬಡವರ್ಗದವರಿಗೆ ವಿದ್ಯುತ್ ಸೌಲಭ್ಯ ದೊರಕಿಸುವ ಮೂಲಕ ಎಲ್ಲಾ ಜನಾಂಗವನ್ನು ಮುಖ್ಯವಾಹಿನಿಗೆ ತರಲು ಯಶಸ್ವಿಯಾಗಿದೆ ಎಂದು ಹೇಳಿದರು.

ಚೆನ್ನಯ್ಯನಕೋಟೆ ಗ್ರಾ.ಪಂ.ಅಧ್ಯಕ್ಷರಾದ ಗೀತಾ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ.ಸದಸ್ಯ ಅರುಣ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರಾಜಪೇಟೆ ತಾ.ಪಂ.ಅಧ್ಯಕ್ಷೆ ಸ್ಮಿತಾಪ್ರಕಾಶ್, ಗ್ರಾ.ಪಂ.ಸದಸ್ಯ ರಾಜು, ಪಿಡಿಓ ರಾಜನ್ ಸೆಸ್ಕ್ ಇಂಜಿನಿಯರ್ ಸುರೇಶ್ ಉಪಸ್ಥಿತರಿದ್ದರು.