ಮಡಿಕೇರಿ, ಜ. 6: ಮೂರ್ನಾಡಿನ ಪದವಿ ಕಾಲೇಜಿನಲ್ಲಿ ಸರ್ಟಿಫಿಕೇಟ್ ಕೋರ್ಸ್ ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ನಿವೃತ್ತ ಪೊಲೀಸ್ ಅಧಿಕಾರಿ ಮುಕ್ಕಾಟಿರ ಚೋಟು ಅಪ್ಪಯ್ಯ, ಮಾಲತಿ ದೇವಯ್ಯ ಹಾಗೂ ಜಾನ್ಸಿ ಅವರು ಉಪನ್ಯಾಸ ತರಬೇತಿಯನ್ನು ನಡೆಸಿಕೊಟ್ಟರು.

ಮುಕ್ಕಾಟಿರ ಚೋಟು ಅಪ್ಪಯ್ಯನವರು ತಮ್ಮ ಉಪನ್ಯಾಸದಲ್ಲಿ ವಿದ್ಯಾರ್ಥಿಗಳು ದೇಶಸೇವೆಯನ್ನು ಮಾಡಲು ಹಿಂಜರಿಯಬಾರದು. ಸೈನ್ಯಕ್ಕೆ ಸೇರಬೇಕು ಹಾಗೂ ಅಲ್ಲಿ ವಿದ್ಯಾರ್ಥಿಗಳಿಗೆ ಇರುವ ಅವಕಾಶಗಳ ಬಗ್ಗೆ ತಿಳಿಸಿಕೊಟ್ಟರು. ಪೊಲೀಸ್ ವೃತ್ತಿಯಲ್ಲಿ ಎಂದೂ ಕೂಡ ದೃತಿಗೆಡಬಾರದು, ತರಬೇತಿ ಅವಧಿಯಲ್ಲಿ ಕಠಿಣ ಪರಿಶ್ರಮದಿಂದ ಉತ್ತಮ ವೃತ್ತಿ ಜೀವನ ಸಾಗಿಸಲು ಸಾಧ್ಯವೆಂದು ಹೇಳುತ್ತ ತನ್ನ ಸುದೀರ್ಘ 36 ವರ್ಷಗಳ ವೃತ್ತಿ ಜೀವನದ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿ ಕೊಂಡರು. ಸಂವಹನ ಇಂಗ್ಲೀಷ್ ತರಗತಿಯಲ್ಲಿ ಮಾಲತಿ ದೇವಯ್ಯ ಅವರು ನಾವು ಇನ್ನೊಬ್ಬರೊಂದಿಗೆ ಮಾತನಾಡುವಾಗ ಹಾಗೂ ದೂರವಾಣಿಯಲ್ಲಿ ಮಾತನಾಡುವಾಗ ನಮೃತೆಯನ್ನು ಹೇಗೆ ಕಾಯ್ದು ಕೊಳ್ಳಬೇಕು ಎಂಬದನ್ನು ಚಟುವಟಿಕೆ ಗಳ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.

ಜಾನ್ಸಿ ಅವರು ಪ್ರಥಮ ಬಿಕಾಂ ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಯೋಗದ ಭಂಗಿಯನ್ನು ಕಲಿಸಿಕೊಟ್ಟರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ ಹಾಗೂ ಉಪನ್ಯಾಸಕ ವರ್ಗದವರು ಹಾಜರಿದ್ದರು.