ಮಡಿಕೇರಿ, ಡಿ. 29: ಕೊಡಗು ಜಿಲ್ಲೆಯಲ್ಲಿ ಮಳೆ/ ಪ್ರವಾಹಕ್ಕೆ ಅನೇಕ ಹಾನಿಗಳು ಸಂಭವಿಸಿದ್ದು, ಸಾರ್ವಜನಿಕ ರಿಂದ ಹಲವು ಮನವಿಗಳು ಸ್ವೀಕೃತವಾಗುತ್ತಿದೆ. ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯಲ್ಲಿ 2486.83 ಕಿ.ಮೀ. ರಸ್ತೆ ರೂ. 321 ಕೋಟಿ, 125 ಸೇತುವೆಗಳಿಗೆ ರೂ. 19.27 ಕೋಟಿ, 160 ಕಟ್ಟಡಗಳಿಗೆ ರೂ. 8.65 ಕೋಟಿ ಮತ್ತು 218 ತಡೆಗೋಡೆಗಳಿಗೆ ರೂ. 168.94 ಕೋಟಿ ಹೀಗೆ ಸುಮಾರು ರೂ. 517.86 ಕೋಟಿಗಳ ನಷ್ಟವನ್ನು ಅಂದಾಜಿಸಲಾಗಿದೆ.
ಆದರೆ ಈವರೆಗೆ ಪಂಚಾಯತ್ ರಾಜ್ ಇಲಾಖೆಗೆ ರೂ. 33.15 ಕೋಟಿಗಳನ್ನು ಮಾತ್ರ ಬಿಡುಗಡೆ ಮಾಡಲಾಗಿದೆ. ಆದ್ದರಿಂದ ಕೊಡಗು ಜಿಲ್ಲೆಯು ಸಾಮಾನ್ಯ ಪರಿಸ್ಥಿತಿಗೆ ಬರಲು ರೂ. 50 ಕೋಟಿ ಮೊತ್ತ ಬಿಡುಗಡೆ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಅವರಿಗೆ ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಮನವಿ ಮಾಡಿದ್ದಾರೆ.
ಎನ್ಆರ್ಡಿಡಬ್ಲ್ಯುಪಿ ಯಡಿ ಕಳೆದ ಸಾಲಿನಲ್ಲಿ ಕೊಡಗು ಜಿಲ್ಲೆಗೆ ಕುಡಿಯುವ ನೀರಿನ ಸಮಸ್ಯೆಗೆ ಯಾವದೇ ಅನುದಾನ ಬಿಡುಗಡೆಯಾಗಿರುವದಿಲ್ಲ. ಈ ಸಂಬಂಧ ರೂ. 50 ಕೋಟಿ ಅನುದಾನವನ್ನು ಬಿಡುಗಡೆ ಮಾಡಲು ಕೋರಲಾಗಿತ್ತು. ಆದರೆ ಈ ಸಾಲಿನಲ್ಲಿ ಕೇವಲ ರೂ. 9.74 ಕೋಟಿ ಅನುದಾನ ನಿಗಧಿಯಾಗಿದೆ. ಇದರಿಂದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಸಾಧ್ಯವಾಗುವದಿಲ್ಲ.
ಗ್ರಾಮೀಣ ಪ್ರದೇಶದಲ್ಲಿ ಕೊಳವೆ ಬಾವಿ, ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣ, ಜ್ಯಾಕ್ವೆಲ್ ನಿರ್ಮಾಣ, ಪೈಪ್ಲೈನ್ ಅಳವಡಿಕೆ ಮುಂತಾದವುಗಳು ಅತೀ ಅವಶ್ಯಕತೆಯಿದ್ದು, ಈ ವರ್ಷ ಪ್ರವಾಹ ಪೀಡಿತ ಜಿಲ್ಲೆಯಾಗಿ ಬೆಟ್ಟಗಳು ಕುಸಿದಿರುವದರಿಂದ ಜಲ ಪ್ರಳಯ ಉಂಟಾಗಿ ನೈಸರ್ಗಿಕ ನೀರಿನ ಮೂಲಗಳು ಇಲ್ಲವಾಗಿದೆ. ಅಂತರ್ಜಲ ಬತ್ತಿ ಹೋಗುತ್ತಿರುವದರಿಂದ ಈ ಸಮಸ್ಯೆ ಪರಿಹಾರಕ್ಕೆ ರೂ.50 ಕೋಟಿ ಹೆಚ್ಚುವರಿ ಅನುದಾನವನ್ನು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳುವಂತೆ ಬಿ.ಎ. ಹರೀಶ್ ಕೋರಿದ್ದಾರೆ.
ರಸ್ತೆ - ಸೇತುವೆ ಅಭಿವೃದ್ಧಿಗೆ ರೂ. 50 ಕೋಟಿ ಬಿಡುಗಡೆಗೆ ಮನವಿ
ಮಡಿಕೇರಿ, ಡಿ. 29: ಕೊಡಗು ಜಿಲ್ಲೆಯಲ್ಲಿ ಮಳೆ/ ಪ್ರವಾಹಕ್ಕೆ ಅನೇಕ ಹಾನಿಗಳು ಸಂಭವಿಸಿದ್ದು, ಸಾರ್ವಜನಿಕ ರಿಂದ ಹಲವು ಮನವಿಗಳು ಸ್ವೀಕೃತವಾಗುತ್ತಿದೆ. ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯಲ್ಲಿ 2486.83 ಕಿ.ಮೀ. ರಸ್ತೆ ರೂ. 321 ಕೋಟಿ, 125 ಸೇತುವೆಗಳಿಗೆ ರೂ. 19.27 ಕೋಟಿ, 160 ಕಟ್ಟಡಗಳಿಗೆ ರೂ. 8.65 ಕೋಟಿ ಮತ್ತು 218 ತಡೆಗೋಡೆಗಳಿಗೆ ರೂ. 168.94 ಕೋಟಿ ಹೀಗೆ ಸುಮಾರು ರೂ. 517.86 ಕೋಟಿಗಳ ನಷ್ಟವನ್ನು ಅಂದಾಜಿಸಲಾಗಿದೆ.
ಆದರೆ ಈವರೆಗೆ ಪಂಚಾಯತ್ ರಾಜ್ ಇಲಾಖೆಗೆ ರೂ. 33.15 ಕೋಟಿಗಳನ್ನು ಮಾತ್ರ ಬಿಡುಗಡೆ ಮಾಡಲಾಗಿದೆ. ಆದ್ದರಿಂದ ಕೊಡಗು ಜಿಲ್ಲೆಯು ಸಾಮಾನ್ಯ ಪರಿಸ್ಥಿತಿಗೆ ಬರಲು ರೂ. 50 ಕೋಟಿ ಮೊತ್ತ ಬಿಡುಗಡೆ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಅವರಿಗೆ ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಮನವಿ ಮಾಡಿದ್ದಾರೆ.
ಎನ್ಆರ್ಡಿಡಬ್ಲ್ಯುಪಿ ಯಡಿ ಕಳೆದ ಸಾಲಿನಲ್ಲಿ ಕೊಡಗು ಜಿಲ್ಲೆಗೆ ಕುಡಿಯುವ ನೀರಿನ ಸಮಸ್ಯೆಗೆ ಯಾವದೇ ಅನುದಾನ ಬಿಡುಗಡೆಯಾಗಿರುವದಿಲ್ಲ. ಈ ಸಂಬಂಧ ರೂ. 50 ಕೋಟಿ ಅನುದಾನವನ್ನು ಬಿಡುಗಡೆ ಮಾಡಲು ಕೋರಲಾಗಿತ್ತು. ಆದರೆ ಈ ಸಾಲಿನಲ್ಲಿ ಕೇವಲ ರೂ. 9.74 ಕೋಟಿ ಅನುದಾನ ನಿಗಧಿಯಾಗಿದೆ. ಇದರಿಂದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಸಾಧ್ಯವಾಗುವದಿಲ್ಲ.
ಗ್ರಾಮೀಣ ಪ್ರದೇಶದಲ್ಲಿ ಕೊಳವೆ ಬಾವಿ, ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣ, ಜ್ಯಾಕ್ವೆಲ್ ನಿರ್ಮಾಣ, ಪೈಪ್ಲೈನ್ ಅಳವಡಿಕೆ ಮುಂತಾದವುಗಳು ಅತೀ ಅವಶ್ಯಕತೆಯಿದ್ದು, ಈ ವರ್ಷ ಪ್ರವಾಹ ಪೀಡಿತ ಜಿಲ್ಲೆಯಾಗಿ ಬೆಟ್ಟಗಳು ಕುಸಿದಿರುವದರಿಂದ ಜಲ ಪ್ರಳಯ ಉಂಟಾಗಿ ನೈಸರ್ಗಿಕ ನೀರಿನ ಮೂಲಗಳು ಇಲ್ಲವಾಗಿದೆ. ಅಂತರ್ಜಲ ಬತ್ತಿ ಹೋಗುತ್ತಿರುವದರಿಂದ ಈ ಸಮಸ್ಯೆ ಪರಿಹಾರಕ್ಕೆ ರೂ.50 ಕೋಟಿ ಹೆಚ್ಚುವರಿ ಅನುದಾನವನ್ನು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳುವಂತೆ ಬಿ.ಎ. ಹರೀಶ್ ಕೋರಿದ್ದಾರೆ.