ಮಡಿಕೇರಿ, ಡಿ. 28: 2019ರ ಜನವರಿ 26 ರಂದು ನವದೆಹಲಿ ಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪಥ ಸಂಚಲನ (ಆರ್.ಡಿ. ಪೆರೇಡ್)ಕ್ಕೆ ಎನ್ಸಿಸಿ ಯಲ್ಲಿ ತೊಡಗಿಸಿ ಕೊಂಡಿರುವ ಕೊಡಗು ಜಿಲ್ಲೆ ಹಾಗೂ ಕೊಡಗು ಮೂಲದ ಒಟ್ಟು ಐವರು ವಿದ್ಯಾರ್ಥಿಗಳು ಆಯ್ಕೆಗೊಂಡಿದ್ದಾರೆ. ಈ ಪಥ ಸಂಚಲನಕ್ಕೆ ತೆರಳುತ್ತಿರುವ ಕರ್ನಾಟಕ ಹಾಗೂ ಗೋವಾ ಬೆಟಾಲಿಯನ್ನ ಆಯ್ಕೆ ಹಾಗೂ ಪೂರ್ವ ಸಿದ್ಧತಾ ಶಿಬಿರದಲ್ಲೂ ಭಾರತೀಯ ಸೇನೆಯಲ್ಲಿ ಕರ್ತವ್ಯ ದಲ್ಲಿರುವ ಜಿಲ್ಲೆಯ ಹಲವರು ತೊಡ ಗಿಸಿಕೊಂಡಿದ್ದು, ಈ ಬೆಟಾಲಿಯನ್ ಮುಖ್ಯಸ್ಥರಾಗಿಯೂ ಕೊಡಗಿನವರಾದ ಕರ್ನಲ್ ಹುದ್ದೆಯ ಅಧಿಕಾರಿಯೊಬ್ಬರು ಈ ಬಾರಿ ತೆರಳುತ್ತಿದ್ದಾರೆ.
ಪಥಸಂಚಲನಕ್ಕೆ ಸಂಬಂಧಿಸಿ ದಂತೆ ವಿವಿಧ ಸುತ್ತುಗಳಲ್ಲಿ ಶಿಬಿರಗಳು ನಡೆದಿದ್ದು, ಬಳಿಕ ಆಯ್ಕೆಗೊಂಡವರಿಗೆ ಬೆಂಗಳೂರಿನ ಜಾಲಹಳ್ಳಿಯಲ್ಲಿರುವ ಏರ್ಫೋರ್ಸ್ನ ನೆಲೆಯಲ್ಲಿ ನವೆಂಬರ್ 24 ರಿಂದ ಈ ತನಕ ಪ್ರೀ ಆರ್ಡಿಸಿ ಕ್ಯಾಂಪ್ ಆಯೋಜಿತ ಗೊಂಡಿತ್ತು. ಅಂತಿಮ ಹಂತದ ಈ ಶಿಬಿರದಿಂದ ಐದು ವಿದ್ಯಾರ್ಥಿಗಳು ಕರ್ನಾಟಕ - ಗೋವಾ ಬೆಟಾಲಿಯನ್ ಮೂಲಕ ಪ್ರತಿನಿಧಿಸುತ್ತಿದ್ದಾರೆ.
ಮಡಿಕೇರಿಯ ಫೀಲ್ಡ್ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಎನ್ಸಿಸಿ ಹಿರಿಯ ವಿದ್ಯಾರ್ಥಿಗಳಾದ ನಾಪಂಡ ನಂಜಪ್ಪ ಹಾಗೂ ನಯನಾ ದಂಪತಿಯ ಪುತ್ರ ಪೊನ್ನಣ್ಣ ಹಾಗೂ ಶ್ರೀಧರ್ ಹಾಗೂ ಶೀಲಾ ದಂಪತಿಯ ಪುತ್ರ ತೇಜಸ್ ಬಿ.ಎಸ್. ಆಯ್ಕೆ ಗೊಂಡಿದ್ದಾರೆ. ಸಾಂಸ್ಕøತಿಕ ವಿಭಾಗ ದಿಂದ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ವಿದ್ಯಾರ್ಥಿನಿ ಧೀರಜ್ ಭೌಮಿಕ್
(ಮೊದಲ ಪುಟದಿಂದ) ಹಾಗೂ ಸಾಂಚಿತ್ ದಂಪತಿಯ ಪುತ್ರ ದೇಬಯಾನ ಭೌಮಿಕ ಆಯ್ಕೆಗೊಂಡಿ ದ್ದಾಳೆ. ಜಿಲ್ಲೆಯ ಈ ಮೂವರಲ್ಲದೆ ಬೆಂಗಳೂರು ಬಿ. ಕ್ಯಾಂಪ್ನಿಂದ ಕೊಡಗಿನ ವಿದ್ಯಾರ್ಥಿಗಳಾದ ಮೂಡೆರ ನೀಲಾ ಮೊಣ್ಣಪ್ಪ ಹಾಗೂ ದಿಯಾ (ಚೀಯಕಪೂವಂಡ ಸರಿತಾ ಅವರ ಪುತ್ರಿ) ನವದೆಹಲಿಗೆ ತೆರಳುತ್ತಿದ್ದಾಳೆ.
ಬೆಂಗಳೂರಿನ ಪ್ರಿಆರ್ಡಿಸಿ ಕ್ಯಾಂಪ್ನಲ್ಲಿ ಕರ್ನಾಟಕ - ಗೋವಾ ಡೈರೆಕ್ಟರೇಟ್ನ ಕಾಂಟಿಜೆಂಟ್ ಕಮಾಂಡರ್ ಆಗಿ ಚೀಯಕಪೂವಂಡ ಕರ್ನಲ್ ಬೋಪಣ್ಣ, ಬೆಳಗಾಂ ನಲ್ಲಿರುವ 8ನೇ ಕರ್ನಾಟಕ ಏರ್ವಿಂಗ್ ಎನ್ಸಿಸಿ ಅಧಿಕಾರಿ ವಿಂಗ್ಕಮಾಂಡರ್ ಪೆಮ್ಮಂಡ ರವಿ ಪೊನ್ನಪ್ಪ, ಹುಬ್ಬಳ್ಳಿಯ 28ನೇ ಕರ್ನಾಟಕ ಬೆಟಾಲಿಯನ್ನ ಎನ್ಸಿಸಿ ಅಧಿಕಾರಿ ಜಿಲ್ಲೆಯ ಮಾದಾಪುರ ಹಾಡಗೇರಿಯ ಸುಬೇದಾರ್ ಮೇಜರ್ ಕುಟ್ಟಂಡ ಯು. ಬೋಪಣ್ಣ, ಬೆಂಗಳೂರಿನಲ್ಲಿ ಎನ್ಸಿಸಿ ಅಧಿಕಾರಿಯಾಗಿರುವ ಮೇಜರ್ ನೆಲ್ಲೀರ ರಾಹುಲ್ ಪೊನ್ನಪ್ಪ ಸೇರಿ ಇತರ ಅಧಿಕಾರಿಗಳು ತೊಡಗಿಸಿ ಕೊಂಡಿದ್ದರು. ಕರ್ನಾಟಕ - ಗೋವಾ ಡೈರೆಕ್ಟರೇಟ್ನ ಬೆಟಾಲಿಯನ್ನ ಮುಖ್ಯಸ್ಥರಾಗಿ (ಕಾಂಟಿಜೆಂಟ್ ಕಮಾಂಡರ್) 106 ವಿದ್ಯಾರ್ಥಿಗಳ ತಂಡವನ್ನು ಕರ್ನಲ್ ಚೀಯಕ ಪೂವಂಡ ಬೋಪಣ್ಣ ಅವರು ಇತರ ಅಧಿಕಾರಿಗಳೊಂದಿಗೆ ತೆರಳುತ್ತಿದ್ದಾರೆ.