ಸಂಪಾಜೆ, ಡಿ. 27: ಪೆರಾಜೆ ಶ್ರೀ ಅಯ್ಯಪ್ಪ ದೀಪೋತ್ಸವ ಸಮಿತಿ ವತಿಯಿಂದ ಶ್ರೀ ಶಬರಿಮಲೆ ಅಯ್ಯಪ್ಪ ಸ್ವಾಮಿಯ 29ನೇ ವರ್ಷದ ದೀಪೋತ್ಸವದ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸವನ್ನು ಶಿವಾನಂದ ಕುಕ್ಕುಂಬಳ್ಳ ನೀಡಿದರು.

ಅಧ್ಯಕ್ಷತೆಯನ್ನು ಪೆರಾಜೆ ಶ್ರೀ ಅಯ್ಯಪ್ಪ ದೀಪೋತ್ಸವ ಸಮಿತಿ ಅಧ್ಯಕ್ಷ ಬೋಜಪ್ಪ ಪೆರುಮುಂಡ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪೆರಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮಿ ಧರಣೀಧರ, ಡಾ. ಲಕ್ಷ್ಮೀಶ್ ಕಲ್ಲುಮುಟ್ಲು, ಶ್ರೀ ಶಾಸ್ತಾವು ದೇವಸ್ಥಾನದ ಮೊಕ್ತೇಸರ ವಿಶ್ವನಾಥ್ ಕುಂಬಳಚೇರಿ, ಶ್ರೀ ಮಲ್ಲಿಕಾರ್ಜುನ ಭಜನಾ ಸಂಘದ ಅಧ್ಯಕ್ಷ ನಾರಾಯಣ ಉಳುವಾರು, ಶಾಸ್ತಾವು ದೇವಾಲಯದ ಕಾರ್ಯದರ್ಶಿ ಹೊನ್ನಪ್ಪ ಕೊಳಂಗಾಯ, ಕಾರ್ಯಕ್ರಮದ ಸ್ಥಳ ದಾನಿಗಳಾದ ಸುಬ್ರಮಣ್ಯ ಮೂಲೆಮಜಲು ಭಾಗವಹಿಸಿದ್ದರು.

ಈ ಸಂದರ್ಭ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಕಲ್ಲುಮುಟ್ಲು ರಾಘವ ಮತ್ತು ಇಂಡೋನೇಷ್ಯಾದಲ್ಲಿ ನಡೆದ 35 ವರ್ಷ ಮೇಲ್ಪಟ್ಟ ಮಹಿಳೆಯರ ಅಂತರರಾಷ್ಟ್ರೀಯ ಅಥ್ಲೆಟಿಕ್ಸ್‍ನಲ್ಲಿ ಒಂದು ಚಿನ್ನ ಹಾಗೂ ಮೂರು ಬೆಳ್ಳಿ ಪದಕ ವಿಜೇತೆ ಪೆರಾಜೆಯ ಬಂಗಾರಕೋಡಿ ವಿದ್ಯಾ ಹರೀಶ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಗಿನೀತ್ ಪಾತಿಕಲ್ಲು ಪ್ರಾರ್ಥಿಸಿ, ಮೋಹನ್ ಪೆರುಮುಂಡ ನಿರೂಪಿಸಿದರು.