ಒಡೆಯನಪುರ:ಡಿ27:-ಕ್ರಿಸ್‍ಮಸ್ ಹಬ್ಬದ ಪ್ರಯುಕ್ತ ಗೋಪಾಲಪುರ ಗ್ರಾಮದ ಸುತ್ತಮುತ್ತಲಿನ ಕ್ರೈಸ್ತ ಬಾಂಧವರು ತಮ್ಮ ತಮ್ಮ ಮನೆಗಳಲ್ಲಿ ಬಾಲ ಏಸುವಿನ ಮೂರ್ತಿಯನ್ನು ತಾವೆ ನಿರ್ಮಿಸಿದ್ದ ಗೋದಲಿಯಲ್ಲಿ ಇರಿಸಿ ಏಸು ದೇವರಿಗೆ ಪ್ರಾರ್ಥನೆ ಸಲ್ಲಿಸಿ ಹೊಸ ಉಡುಗೆ ತೊಡುಗೆ ಧರಿಸಿ ಸಂಭ್ರ್ರಮಿಸಿದರು. ಕ್ರಿಸ್‍ಮಸ್ ಹಬ್ಬದ ಪ್ರಯುಕ್ತ ಬಾಂಧವರು ಕೇರಳ ಶೈಲಿಯ ವಿವಿಧ ತಿಂಡಿ ತಿನ್ನಿಸುಗಳನ್ನು ಮತ್ತು ಕೇಕ್ ತಯಾರಿಸಿ ಅಕ್ಕಪಕ್ಕದ ಮನೆಗಳಿಗೆ ವಿತರಿಸಿದರು. ನಂತರ ಹಬ್ಬದ ಪ್ರಯುಕ್ತ ಶುಭಾಶಯ ವಿನಿಮಯ ಮಾಡಿಕೊಂಡರು.