4 ಮಂದಿ ಬಂಧನ

ವೀರಾಜಪೇಟೆ, ಡಿ. 27: ವೀರಾಜಪೇಟೆಯ ಗೋಣಿಕೊಪ್ಪ ರಸ್ತೆಯ ವಿದ್ಯಾನಗರಕ್ಕೆ ತೆರಳುವ ಖಾಲಿ ಜಾಗದಲ್ಲಿ ನಡೆಯುತ್ತಿದ್ದ ಸಿಂಗಲ್ ನಂಬರಿನ ಮಟ್ಕಾದಂಧೆ ಮೇಲೆ ಅಪರಾಹ್ನ ಧಾಳಿ ನಡೆಸಿದ ನಗರ ಪೊಲೀಸರು ಬೇತರಿ ಗ್ರಾಮದ ಮಹಮ್ಮದ್ ಆಲಿ, ಪೆರುಂಬಾಡಿಯ ಕಬೀರ್, ಗಿರೀಶ್ ಹಾಗೂ ಮೊಯ್ದು ಎಂಬ ನಾಲ್ವರನ್ನು ಬಂಧಿಸಿ ಪಣಕ್ಕಿಟ್ಟಿದ್ದ ರೂ 21000 ನಗದನ್ನು ವಶ ಪಡಿಸಿಕೊಂಡಿದ್ದಾರೆ.

ಡಿವೈಎಸ್‍ಪಿ ನಾಗಪ್ಪ ನಿರ್ದೇಶನದಲ್ಲಿ ನಗರ ಸಬ್‍ಇನ್ಸ್ ಪೆಕ್ಟರ್ ಸಂತೋಷ್ ಕಶ್ಯಪ್ ನೇತೃತ್ವದಲ್ಲಿ ಮುನೀರ್, ಸುಬ್ರಮಣಿ

ರಜನ್, ಹಾಗೂ ಸತೀಶ್ ಇವರುಗಳು ಧಾಳಿಯಲ್ಲಿ ಭಾಗವಹಿಸಿದ್ದರು.