ಮಡಿಕೇರಿ, ಡಿ. 28: ಸಾಮಾಜಿಕ ಜಾಲತಾಣದಲ್ಲಿ ಕ್ರೈಸ್ತ ದೇವ ಯೇಸುಕ್ರಿಸ್ತನ ಬಗ್ಗೆ ಅವಹೇಳನಾಕಾರಿ ಚಿತ್ರದೊಂದಿಗೆ ಪೋಸ್ಟ್ ಮಾಡಿ, ಕ್ರೈಸ್ತರ ಭಾವನೆಗೆ ಧಕ್ಕೆ ತರುವಂತಹ ಕೃತ್ಯವೆಸಗಲಾಗಿದ್ದು, ಇದನ್ನು ಖಂಡಿಸಿ ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಶನ್ ವತಿಯಿಂದ ಕ್ರೈಸ್ತ ಬಾಂಧವರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.ಸಂತ ಮೈಕಲ್ಲರ ಚರ್ಚ್ ಆವರಣದಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು ನಂತರ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿ, ಶಾಂತಿಯುತ ಪ್ರತಿಭಟನೆ ನಡೆಸಿದರು. ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿರುವ ಬಾಗಲಕೋಟೆಯ ರವೀಂದ್ರಗೌಡ್ ಪಾಟೀಲ ಎಂಬಾತ ನನ್ನು ಬಂಧಿಸಿ, ಆತನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಅಸೋಸಿಯೇಶನ್ ಸ್ಥಾಪಕಾಧ್ಯಕ್ಷ ಲಾರೆನ್ಸ್, ಅಧ್ಯಕ್ಷ ಜೋಸೆಫ್ ಶಾಂ ಅವರುಗಳು ಶಾಂತಿಯಿಂದಿರುವ ಕ್ರೈಸ್ತರ ಭಾವನೆಗಳಿಗೆ ಧಕ್ಕೆ ತರುವಂತಹ ಕೆಲಸ ಮಾಡಿರುವ ಮತಾಂಧ ರವೀಂದ್ರನನ್ನು ಬಂಧಿಸಬೇಕು; ಸರಕಾರ, ಜನಪ್ರತಿ ನಿಧಿಗಳು ಕ್ರೈಸ್ತರಿಗೆ ಮುಂಬರುವ ಚುನಾವಣೆಯಲ್ಲಿ ಅಭ್ಯರ್ಥಿಯನ್ನು ಗೆಲ್ಲಿಸುವ ಶಕ್ತಿ ಇಲ್ಲದಿದ್ದರೂ ಸೋಲಿಸುವಷ್ಟು ತಾಕತ್ತಿದೆ.
(ಮೊದಲ ಪುಟದಿಂದ) ನಮಗೆ ಯಾರು ಸಹಕಾರ ನೀಡುತ್ತಾರೋ ಅವರನ್ನು ಬೆಂಬಲಿಸುವದಾಗಿ ಹೇಳಿದರು. ಕ್ರೈಸ್ತರ ಕೊಡಗು ವಲಯದ ಶ್ರೇಷ್ಠ ಧರ್ಮಗುರು ಫಾ. ಮದಲೈಮುತ್ತು, ಮಡಿಕೇರಿ ಧರ್ಮಗುರು ನವೀನ್ಕುಮಾರ್, ಚೆಟ್ಟಳ್ಳಿಯ ಮಾರ್ಟಿನ್, ಕೂಡಿಗೆಯ ಸ್ಟೀಫನ್, ಸಿದ್ದಾಪುರದ ಜೋನ್ಹಾಸ್, ಕಾನ್ವೆಂಟ್ ಶಾಲೆಗಳ ಮುಖ್ಯಸ್ಥರು, ಮುಖಂಡರುಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಬಳಿಕ ಜಿಲ್ಲಾಧಿ ಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಬಂಧನಕ್ಕೆ ಆಗ್ರಹ
ಸಾಮಾಜಿಕ ಜಾಲತಾಣದಲ್ಲಿ ಯೇಸುಕ್ರಿಸ್ತರ ಬಗ್ಗೆ ಆಕ್ಷೇಪಾರ್ಹ ಫೋಟೋಗಳನ್ನು ಲಗತ್ತಿಸಿ ಕ್ರೈಸ್ತರ ಭಾವನೆಗೆ ದಕ್ಕೆ ತಂದಿರುವ ಬಾಗಲಕೋಟೆಯ ರವೀಂದ್ರ ಪಾಟೀಲ ಎಂಬಾತನನ್ನು ತಕ್ಷಣ ಬಂಧಿಸಿ ಕಾನೂನಿನ ಚೌಕಟ್ಟಿನಡಿ ಶಿಕ್ಷೆಗೆ ಗುರಿ ಪಡಿಸಬೇಕೆಂದು ಒತ್ತಾಯಿಸಿರುವ ಕೊಡಗು ಜಿಲ್ಲಾ ರೋಮನ್ ಕ್ಯಾಥೊಲಿಕ್À ಅಸೋಸಿ ಯೇಷನ್ ಪ್ರತಿಭಟನೆಯನ್ನು ತೀವ್ರಗೊಳಿಸುವ ಎಚ್ಚರಿಕೆ ನೀಡಿದೆ.
ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಸಂಘದ ಉಪಾಧ್ಯಕ್ಷ ಜಾನ್ಸನ್ ಅವರು, ಶುಭಾಷಯ ಕೋರುವ ನೆಪದಲ್ಲಿ ರವೀಂದ್ರ ಪಾಟೀಲ ಎಂಬಾತ ಯೇಸುವನ್ನು ಅವಹೇಳನಕಾರಿಯಾಗಿ ಬಿಂಬಿಸುವ ಮೂಲಕ ಇಡೀ ವಿಶ್ವದ ಕ್ರೈಸ್ತ ಸಮುದಾಯಕ್ಕೆ ಅವಮಾನ ಮಾಡಿದ್ದಾನೆ. ಈ ಪ್ರಕರಣವನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಯೇಸುಕ್ರಿಸ್ತ ಶಾಂತಿ ಮತ್ತು ಪ್ರೀತಿಯ ಸಂದೇಶವನ್ನು ಸಾರಿದ ಮಹಾ ಪುರುಷನಾಗಿದ್ದು, ಆತನನ್ನು ಅವಹೇಳನಕಾರಿಯಾಗಿ ಬಿಂಬಿಸುವ ಮೂಲಕ ಸಮಾಜದಲ್ಲಿ ಒಡಕು ಮೂಡಿಸುವ ಸಂಚು ನಡೆದಿದೆ. ಅಶಾಂತಿ ಸೃಷ್ಟಿಸುವದು ಈ ಕೃತ್ಯದ ಹಿಂದಿನ ಉದ್ದೇಶವಾಗಿದ್ದು, ಪೊಲೀಸ್ ಇಲಾಖೆ ಸಮಗ್ರ ತನಿಖೆ ನಡೆಸಬೇಕು ಎಂದರು.
ರವೀಂದ್ರ ಪಾಟೀಲ ಅಸ್ತ್ರವಿಲ್ಲದ ಭಯೋತ್ಪಾದಕ ಎಂದು ಟೀಕಿಸಿದ ಅವರು, ಆತನ ಅಕ್ಷರದ ಮೂಲಕ ಭಯೋತ್ಪಾದನೆಯನ್ನು ಸೃಷ್ಟಿಸಲು ಯತ್ನಿಸಿದ್ದಾನೆ. ಕ್ರೈಸ್ತ ಧರ್ಮದ ತತ್ವಗಳ ಅರಿವಿಲ್ಲದೆ ಆತ ಇಂತಹ ಸಂದೇಶವನ್ನು ರವಾನಿಸಿ ಕ್ರೈಸ್ತರ ಭಾವನೆಗಳನ್ನು ಕೆರಳಿಸುವ ಪ್ರಯತ್ನ ಮಾಡಿದ್ದಾನೆ ಎಂದು ಟೀಕಿಸಿದರು. ಜಿಲ್ಲೆಯ ಮಡಿಕೇರಿ, ವೀರಾಜಪೇಟೆ, ಸಿದ್ದಾಪುರ, ದಕ್ಷಿಣ ಕನ್ನಡದ ಬೆಳ್ತಂಗಡಿ, ಮಂಗಳೂರು ಮುಂತಾದ ಕಡೆ ಕಿಡಿಗೇಡಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ಕುರಿತು ಸರಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಜ.3ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದರು.
ಸೋಮವಾರಪೇಟೆಯ ಸಂತ ಜೋಸೆಫರ ಪದವಿಪೂರ್ವ ಕಾಲೇಜ್ನ ಪ್ರಾಂಶುಪಾಲ ಹಾಗೂ ಧರ್ಮಗುರು ಟೆನ್ನಿಕುರಿಯನ್ ಮಾತನಾಡಿ, ಶಾಂತಿ ಮತ್ತು ಪ್ರೀತಿಯ ಮೂಲಕ ಇಡೀ ಮನುಷ್ಯ ಸಮಾಜ ವನ್ನು ಪ್ರೀತಿಸುವಂತೆ ಸಂದೇಶ ನೀಡಿದ ಏಸು ಕ್ರೈಸ್ತನ ಬಗ್ಗೆ ಅವಹೇಳನಕಾರಿಯಾಗಿ ಬಿಂಬಿಸಿರು ವದು ನಮಗೆ ತೀವ್ರ ದುಃಖವಾಗಿದೆ. ಯಾವದೇ ಪ್ರಜೆ ಯಾವದೇ ಧರ್ಮವನ್ನು ಅವಹೇಳನ ಮಾಡ ಬಾರದು. ಆ ನಿಟ್ಟಿನಲ್ಲಿ ಸರಕಾರಗಳು ಕಟ್ಟುನಿಟ್ಟಿನ ಕಾನೂನು ರೂಪಿಸಬೇಕು ಎಂದು ಹೇಳಿದರು.
ಸಂಘದ ಸಂಚಾಲಕ ಜೋಕಿಂ ರಾಡ್ರಿಗಸ್ ಮಾತನಾಡಿ, ಈಗಾಗಲೇ ಸಾಂಕೇತಿಕ ಪ್ರತಿಭಟನೆಯ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿ¸ Àಲಾಗಿದ್ದು, ಇದಕ್ಕೆ ಸ್ಪಂದನೆ ದೊರಕದಿ ದ್ದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ದೇವಾಲಯಗಳ ಕ್ರೈಸ್ತಬಾಂಧ ವರನ್ನು ಸಂಘಟಿಸಿ ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುವ ದಾಗಿ ಎಚ್ಚರಿಕೆ ನೀಡಿದರು. ಸುದ್ದಿ ಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಜೋಸೆಫ್ ಶ್ಯಾಂ, ಪ್ರಧಾನ ಕಾರ್ಯದರ್ಶಿ ಜಾನ್ಸನ್ ಪಿಂಟೋ ಹಾಗೂ ಖಜಾಂಚಿ ಐ.ಡಿ.ರಾಯ್ ಉಪಸ್ಥಿತರಿದ್ದರು.