ಮಡಿಕೇರಿ, ಡಿ. 25: ಮೂರ್ನಾಡಿನ ಪದವಿ ಕಾಲೇಜಿನಲ್ಲಿ ಇತ್ತೀಚೆಗೆ ಸರ್ಟಿಫಿಕೇಟ್ ಕೋರ್ಸ್ ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಬ್ರಹ್ಮಗಿರಿ ಸಂಪಾದಕರಾದ ಡಾ. ಉಳ್ಳಿಯಡ ಪೂವಯ್ಯ ಹಾಗೂ ಮಾಲತಿ ದೇವಯ್ಯ ಆಗಮಿಸಿದ್ದರು.
ಉಳ್ಳಿಯಡ ಪೂವಯ್ಯ ಪತ್ರಿಕೋದ್ಯಮ ನಡೆದು ಬಂದ ದಾರಿ ಹಾಗೂ ಪ್ರಸ್ತುತ ಸಮಾಜದ ಸುಧಾರಣೆಯಲ್ಲಿ ಪತ್ರಿಕೆಗಳ ಪಾತ್ರದ ಬಗ್ಗೆ ತಿಳಿಸಿಕೊಟ್ಟರು. ಪ್ರತಿಯೊಬ್ಬರು ಕೂಡ ಪತ್ರಿಕೆಯನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕೆಂದು ಹೇಳಿದರು.
ಸಂವಹನ ಇಂಗ್ಲೀಷ್ ತರಗತಿಯಲ್ಲಿ ಮಾಲತಿ ದೇವಯ್ಯ ಇಂಗ್ಲೀಷ್ ಕಲಿಯಲು ಬೇಕಾದ ಮೂಲ ಅಗತ್ಯತೆಯ ಬಗ್ಗೆ ವಿವರಿಸಿದರು. ಪ್ರತಿಯೊಬ್ಬರು ಕೂಡ ಇಂಗ್ಲೀಷ್ ಮಾತನಾಡಲು ಪ್ರಾರಂಭಿಸಬೇಕು. ಕಲಿಕೆಯ ಹಂತದಲ್ಲಿ ತೊಡಕಾದರೂ ಕೂಡ ಬಿಡದೆ ಅಭ್ಯಸಿಸಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ ಹಾಗೂ ಉಪನ್ಯಾಸ ವರ್ಗದವರು ಹಾಜರಿದ್ದರು.