ಗೋಣಿಕೊಪ್ಪಲು, ನ. 24 : ತಿತಿಮತಿಯ ಕುವ್ವತ್ತುಲ್ಲಾ ಇಸ್ಲಾಂ ಸಭಾ ಜುಮಾ ಮಸೀದಿ ವತಿಯಿಂದ ತಾ. 26ರಂದು ಈದ್ ಮಿಲಾದ್ ಆಚರಣೆಗೆ ತೀರ್ಮಾನಿಸಲಾಗಿದೆ. ಅಂದು ತಿತಿಮತಿಯ ಶಂಶುಲ್ ಉಲಮಾ ನಗರ್ ವೇದಿಕೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು ಸೈಯದ್ ನಜುಮುದ್ದೀನ್ ಪೂಕೋಯ ತಂಙಳ್ ನೂತನ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಮಸೀದಿಯ ಕಾರ್ಯದರ್ಶಿ ಬಷೀರ್ ಹೇಳಿಕೆ ಮೂಲಕ ತಿಳಿಸಿದ್ದಾರೆ.

ಅಂದು ಬೆಳಿಗ್ಗೆ 8 ಗಂಟೆಗೆ ಮಸೀದಿಯ ಅಧ್ಯಕ್ಷ ಧ್ವಜಾರೋಹಣ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ನಂತರ ವಿದ್ಯಾರ್ಥಿಗಳಿಂದ ಮೌಲಿದ್ ಪಾರಾಯಣ, ಮದ್ರಸ ವಿದ್ಯಾರ್ಥಿಗಳಿಂದ ಕಿರಾಹತ್ ನಡೆಯಲಿದೆ. ಮಸೀದಿಯ ಮಾಜಿ ಅಧ್ಯಕ್ಷ ಸೈಯದಲವಿ ದಾರಿಮಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮುಖ್ಯ ಭಾಷಣಕಾರರಾಗಿ ಅಲ್ ಹಾಫೀಜ್ ಕುಮ್ಮನಂ ನಿಝಾಮುದ್ದೀನ್ ಹಝ್ಹರಿ ಅಲ್ಖಾಸಿಮಿ ಪಾಲ್ಗೊಳ್ಳಲಿದ್ದಾರೆ