ಗೋಣಿಕೊಪ್ಪಲು, ಸೆ. 25: ಜಿಲ್ಲೆಯಲ್ಲಿ ಪ್ರವಾಹದಿಂದ ಸಂಕಷ್ಟ ಅನುಭವಿಸುತ್ತಿರುವ ಸಂತ್ರಸ್ತರ ಪ್ರದೇಶಗಳಾದ ಮಾಂದಲಪಟ್ಟಿ, ವಣಚಲು, ಎರಡನೇ ಮೊಣ್ಣಂಗೇರಿ, ಚಾಮುಂಡೇಶ್ವರಿ ನಗರದ ಪ್ರದೇಶದಲ್ಲಿ ಇರುವ ಆಯ್ದ ನೂರು ಸಂತ್ರಸ್ತರ ಕುಟುಂಬಗಳಿಗೆ ಶ್ರೀರಂಗಪಟ್ಟಣದ ರಾಜ್ಯ ರೈತ ಸಂಘದ ಮುಖಂಡ ಕೆ.ಎಸ್. ನಂಜುಂಡೇಗೌಡ ಮುಂದಾಳತ್ವದಲ್ಲಿ ಗುಣಮಟ್ಟದ ಅಕ್ಕಿ ಹಾಗೂ ಆಹಾರ ಸಾಮಗ್ರಿಗಳನ್ನು ಕೊಡಗು ಜಿಲ್ಲಾ ರೈತ ಸಂಘದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ನೇತೃತ್ವದಲ್ಲಿ ವಿತರಿಸಲಾಯಿತು.
ಶ್ರೀರಂಗಪಟ್ಟಣದ ರೈತ ಮುಖಂಡರಾದ ಕೃಷ್ಣೇಗೌಡ, ಫಿಲಿಫ್, ಉಮೇಶ್ ಕುಮಾರ್, ಪುರುಷೋತ್ತಮ್, ಮಹಾದೇವಾ, ರವಿ, ನಂಜುಂಡಪ್ಪ, ಹನುಮಂತಪ್ಪ, ಮಹಾಲಿಂಗು, ಕೆಂಪೇಗೌಡ, ರಮೇಶ್, ಕೃಷ್ಣ, ಚಿಕ್ಕಣ್ಣ ಹಾಗೂ ರಾಮಕೃಷ್ಣರವರು ಸೇರಿದಂತೆ ಕೊಡಗು ಜಿಲ್ಲಾ ರೈತ ಸಂಘದ ಮುಖಂಡರು ನೆರೆ ಪ್ರದೇಶಗಳಿಗೆ ಖುದ್ದು ಭೇಟಿ ನೀಡುವ ಮೂಲಕ ರೈತರಿಂದ ಸಂಗ್ರಹಿಸಿದ್ದ ಅಕ್ಕಿ ಹಾಗೂ ಆಹಾರ ಪದಾರ್ಥಗಳನ್ನು ವಿತರಿಸಿದರು. ಫಲಾನುಭವಿಯ ಆಧಾರ್ ಸಂಖ್ಯೆಯ ಮೂಲಕ ಗುರುತಿಸಿ ವಸ್ತುಗಳನ್ನು ಲೋಪವಾಗದಂತೆ ವಿತರಿಸಿದರು.
ಮುಂದಿನ ದಿನದಲ್ಲಿ ರೈತ ಮಿತ್ರರು ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಗೆ ಆಗಮಿಸಿ ಜಿಲ್ಲೆಯಲ್ಲಿ ಮನೆ ಕಳೆದುಕೊಂಡಿರುವ ಪ್ರದೇಶದಲ್ಲಿ ಮನೆ ನಿರ್ಮಾಣ ಸಂದರ್ಭ ಜಿಲ್ಲೆಯಲ್ಲಿಯೇ ತಂಗುವ ಮೂಲಕ ಸಂಕಷ್ಟದಲ್ಲಿರುವ ಮನೆಗಳಲ್ಲಿ ಕೆಲಸ ಮಾಡುವ ತೀರ್ಮಾನ ಕೈಗೊಂಡಿರುವ ಬಗ್ಗೆ ರಾಜ್ಯ ರೈತ ಸಂಘದ ಹಿರಿಯ ಮುಖಂಡರಾದ ಕೆ.ಎಸ್. ನಂಜುಂಡೇಗೌಡ ಮಾಧ್ಯಮ ಮಿತ್ರರಿಗೆ ತಿಳಿಸಿದರು. ಈ ಭಾಗದಲ್ಲಿ ಸುರಿದ ಭಾರೀ ಮಳೆಯಿಂದ ಮಂಡ್ಯ ಮುಂತಾದ ಜಿಲ್ಲೆಗಳ ರೈತರು ನೀರನ್ನು ಬಳಸುತ್ತಿದ್ದಾರೆ. ಕೊಡಗಿನ ಜನರಿಗೆ ತೊಂದರೆಯಾದ ಸಂದರ್ಭದಲ್ಲಿ ತಾವುಗಳು ಸಹಾಯಕ್ಕೆ ನಿಲ್ಲುವದು ನಮ್ಮ ಕರ್ತವ್ಯ. ಎಂದಿಗೂ ತಾವು ಕೊಡಗಿನ ಋಣವನ್ನು ತೀರಿಸಲು ಸಾಧ್ಯವಿಲ್ಲ ಎಂದರು.
ಕೊಡಗು ಜಿಲ್ಲೆಯ ರೈತ ಸಂಘದ ಅಧ್ಯಕ್ಷರಾದ ಕಾಡ್ಯಮಾಡ ಮನು ಸೋಮಯ್ಯ ಜಿಲ್ಲೆಯ ಸಂತ್ರಸ್ತರು ಕಷ್ಟದಲ್ಲಿ ಸಿಲುಕಿದ್ದಾರೆ. ಈ ಭಾಗಕ್ಕೆ ಕೈಲಾದ ಸಹಾಯ ಮಾಡಬೇಕೆಂದು ರೈತ ಮುಖಂಡರಲ್ಲಿ ಮನವಿ ಸಲ್ಲಿಸಿದ್ದರು. ಮನವಿಯನ್ನು ಆಧಾರಿಸಿ ಕೊಡಗಿಗೆ ಭೇಟಿ ನೀಡುವ ಮೂಲಕ ಖುದ್ದಾಗಿ ನೆರೆ ಸಂತ್ರಸ್ತರ ಕಷ್ಟವನ್ನು ಕಂಡಿದ್ದೇವೆ. ಮುಂದೆಯೂ ಸಹಕಾರ ಮಾಡುವ ಭರವಸೆಯನ್ನು ಶ್ರೀರಂಗಪಟ್ಟಣದ ರೈತ ಮುಖಂಡರು ಹೇಳಿದರು.
ಈ ಸಂದರ್ಭ ಕೊಡಗು ರೈತ ಸಂಘದ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಚೋನಿರ ಸತ್ಯ, ಮುಖಂಡರಾದ ಮಲ್ಚೀರ ಗಿರೀಶ್, ಮಲ್ಚೀರ ಅಶೋಕ್, ಮಲ್ಚೀರ ಅನಿಲ್, ಮಲ್ಚೀರ ಹರೀಶ್, ಮಲ್ಚೀರ ಹ್ಯಾರಿ, ತೀತರಮಾಡ ಸುನೀಲ್, ತೀತರಮಾಡ ರಾಜ, ಬಾದುಮಂಡ ಮಹೇಶ್, ಬಾರಿಯಂಡ ಜಯಂತ್, ಮನೆಯಪಂಡ ಪೊನ್ನಪ್ಪ, ಮಂಡೇಪಂಡ ಅರ್ಜುನ, ಚಿಯಕ್ಪೂವಂಡ ಮಿಥುನ್, ಚಿಯಕ್ಪೂವಂಡ ವೇಣು ತಮ್ಮಯ್ಯ, ಕೊಂಗೇರ ಗಣಪತಿ, ಪುಚ್ಚಿಮಾಡ ಸುನಿಲ್, ಪಪ್ಪು ತಮ್ಮಯ್ಯ, ಕಿರಣ್, ಅಪ್ಪಾರಂಡ ನೀರಜ್ ಅಪ್ಪಣ್ಣ, ಕೆ.ಎಸ್. ಸೂರಜ್, ಸುನಿಲ್, ಜಯಂತ್ ಚಿಣ್ಣಪ್ಪ, ಮುಂತಾದವರು ಹಾಜರಿದ್ದರು.
- ಹೆಚ್.ಕೆ. ಜಗದೀಶ್