ವೀರಾಜಪೇಟೆ, ಸೆ. 22: ಕರ್ನಾಟಕ ಸುಗಮ ಸಂಗೀತ ಅಕಾಡೆಮಿ ವತಿಯಿಂದ ಇತ್ತೀಚೆಗೆ ಮೈಸೂರಿನಲ್ಲಿ ನಡೆದ 24ನೇ ರಾಜ್ಯ ಮಟ್ಟದ ಭಾವಗೀತೆ ಸ್ಪರ್ಧೆಯಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಿದ ವೀರಾಜಪೇಟೆಯ ಎಂ.ಡಿ. ಆಯುಷ್ ಪ್ರಥsÀಮ ಬಹುಮಾನವನ್ನು ಪಡೆದುಕೊಂಡಿದ್ದಾರೆ. ಇದೂ ಅಲ್ಲದೆ ಈತ ಮೈಸೂರಿನಲ್ಲಿ ನಡೆದ ಅಮರ ಕಲಾ ಅಕಾÀಡೆಮಿ ಆಶ್ರಯದ ಶಾಸ್ತ್ರೀಯ ಸಂಗೀತ, ಭಾವಗೀತೆ, ಚಲನ ಚಿತ್ರಗೀತೆಗಳ ಅಂತರ ಶಾಲಾ ಸ್ಪರ್ಧೆಗಳಲ್ಲಿಯೂ ಪಾಲ್ಗೊಂಡು ಪ್ರಥಮ ಸ್ಥಾನ ಪಡೆದಿದ್ದಾರೆ. ಈತ ವೀರಾಜಪೇಟೆಯ ವೈದ್ಯ ದಂಪತಿಗಳಾದ ಡಾ. ದೀಪಕ್ ಹಾಗೂ ಡಾ. ಸುಪ್ರಿಯಾರವರ ಪುತ್ರ, ಗೋಣಿಕೊಪ್ಪ ಕಾಪ್ಸ್ ಶಾಲೆಯ ವಿದ್ಯಾರ್ಥಿ.