ಮಡಿಕೇರಿ, ಸೆ. 20 : ಜಿಲ್ಲೆಯಲ್ಲಿ ಇತ್ತೀಚೆಗೆ ಸಂಭವಿಸಿರುವ ಜಲಪ್ರಳಯದ ದುರಂತದ ಹಿನ್ನೆಲೆಯಲ್ಲಿ ಬೆಂಗಳೂರು ಪೀಣ್ಯದಲ್ಲಿನ ಜೋಡಿ ಮುನೀಶ್ವರ ಸ್ವಾಮಿ ದೇವಸ್ಥಾನದ ಶಿವಶಂಕರ ಗುರೂಜಿ ತಂಡದಿಂದ ತಾ. 22ರಂದು (ನಾಳೆ) ಬೆಳಿಗ್ಗೆ 9 ರಿಂದ 12 ಗಂಟೆಯವರೆಗೆ ಶಾಂತಿ ಹೋಮ ಪೂಜೆ ಹಾಗೂ ಬ್ರಹ್ಮರಾಕ್ಷಸ ಉಚ್ಚಾಟನಾ ಪೂಜೆಯನ್ನು ಹಮ್ಮಿಕೊಳ್ಳಲಾಗಿದೆ. ಅಪರಾಹ್ನ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿದೆ. ಇದರ ಸಂಯೋಜಕರುಗಳಾಗಿ ಬೆಂಗಳೂರಿನಲ್ಲಿರುವ ಮಾಜಿ ಸೈನಿಕ ಕೊಟ್ಟಂಗಡ ಎಂ. ಸೋಮಯ್ಯ, ಬಲ್ಲಮುಂಡೂರುವಿನ ಕೊಟ್ಟಂಗಡ ಜೆ. ಅಯ್ಯಪ್ಪ, ಬಾರಿಯಂಡ ಎಸ್. ಕುಶಾಲಪ್ಪ, ಐಮುಡಿಯಂಡ ರಮೇಶ್ ಕಾರ್ಯನಿರ್ವಹಿಸುತ್ತಿದ್ದಾರೆ. ಮಾಹಿತಿಗೆ 9590967487, 9448066976 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು.