ಸೋಮವಾರಪೇಟೆ, ಸೆ. 18: ತಾಲೂಕಿನ ಜಾಗೇನಹಳ್ಳಿ ಗ್ರಾಮದ ಶ್ರೀ ಬಸವೇಶ್ವರ ದೇವಾಲಯ ನಿರ್ಮಾಣಕ್ಕೆ ರಾಜ್ಯ ಸರ್ಕಾರದ ಆರಾಧನಾ ಯೋಜನೆಯಡಿ ಬಿಡುಗಡೆಯಾದ ರೂ. 50 ಸಾವಿರ ಅನುದಾನದ ಚೆಕ್‍ನ್ನು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ವಿತರಿಸಿದರು.

ದೇವಾಲಯ ಸಮಿತಿ ಅಧ್ಯಕ್ಷ ಸತ್ಯವೇಲು, ಉಪಾಧ್ಯಕ್ಷ ರಾಜೇಶ್, ಕಾರ್ಯದರ್ಶಿ ಮನೋಹರ್ ಅವರುಗಳು ಶಾಸಕರ ಕಚೇರಿಯಲ್ಲಿ ಅನುದಾನದ ಚೆಕ್ ಸ್ವೀಕರಿಸಿದರು.