ಗೋಣಿಕೊಪ್ಪ ವರದಿ, ಸೆ. 7: ಇಲ್ಲಿನ ಅನುದಾನಿತ ಪ್ರೌಢಶಾಲೆಯ ಟೈಗರ್ ಪಗ್ ಪರಿಸರ ಸಂಘದ ವತಿಯಿಂದ ಸ್ವಚ್ಛತಾ ಪಾಕ್ಷಿಕ ಅಂಗವಾಗಿ ಸ್ವಚ್ಛತಾ ಜಾಗೃತಿ ದಿನ ಆಚರಿಸಲಾಯಿತು. ಶಾಲಾ ಆವರಣದಲ್ಲಿ ಸ್ವಚ್ಛತೆ ಮಾಡಲಾಯಿತು. ಶ್ರಮದಾನ ಮೂಲಕ ಕಳೆ ಗಿಡಗಳನ್ನು ಕಿತ್ತು ಹಾಕಿದರು.

ಈ ಸಂದರ್ಭ ಮುಖ್ಯ ಶಿಕ್ಷಕg ರತೀಶ್‍ರೈ, ಪರಿಸರ ಸಂಘದ ಸಂಚಾಲಕ ಡಿ. ಕೃಷ್ಣ ಚೈತನ್ಯ ಪಾಲ್ಗೊಂಡಿದ್ದರು.