ಕುಶಾಲನಗರ, ಆ. 30: ಕುಶಾಲನಗರ ರೋಟರಿ ಸಂಸ್ಥೆ, ರೋಟರಿ ಕೊಯಮತ್ತೂರು ಮಿಡ್‍ಟೌನ್ ಮತ್ತು ಇನ್ನರ್‍ವೀಲ್ ಕ್ಲಬ್ ಸಂಯುಕ್ತ ಆಶ್ರಯದಲ್ಲಿ 6ನೇ ವರ್ಷದ ಕೃತಕ ಕಾಲು ಜೋಡಣಾ ಕಾರ್ಯಾಗಾರ ನಡೆಯಿತು. ರೋಟರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮಕ್ಕೆ ರೋಟರಿ ಮಾಜಿ ರಾಜ್ಯಪಾಲ ಡಾ. ರವಿ ಅಪ್ಪಾಜಿ ಚಾಲನೆ ನೀಡಿದರು. ಶಿಬಿರದಲ್ಲಿ ಕುಶಾಲನಗರ ಸೇರಿದಂತೆ ವಿವಿಧೆಡೆಗಳ 53 ಮಂದಿ ಫಲಾನುಭವಿಗಳಿಗೆ ಉಚಿತವಾಗಿ ಕೃತಕ ಕಾಲು ಜೋಡಣೆ ಕಾರ್ಯನಡೆಸಲಾಯಿತು.

ವಲಯ ರಾಜ್ಯಪಾಲ ಧರ್ಮಪುರ ನಾರಾಯಣ, ರೋಟರಿ ಅಧ್ಯಕ್ಷ ಜೇಕಬ್, ಕಾರ್ಯದರ್ಶಿ ಪ್ರೇಮ್‍ಚಂದ್, ಇನ್ನರ್‍ವೀಲ್ ಕ್ಲಬ್ ಅಧ್ಯಕ್ಷೆ ಸುನಿತಾ ಮಹೇಶ್, ಕಾರ್ಯದರ್ಶಿ ಸಂಧ್ಯಾ ಪ್ರಮೋದ್, ಸಮುದಾಯ ಕಾರ್ಯಕ್ರಮ ಅಧಿಕಾರಿ ಮಹೇಶ್ ನಲ್ವಡೆ, ಡಾ. ಹರಿ ಎ. ಶೆಟ್ಟಿ, ರಂಗಸ್ವಾಮಿ ಮತ್ತಿತರರು ಇದ್ದರು.