ಸೋಮವಾರಪೇಟೆ, ಆ. 26 : ಸಮೀಪದ ಬೇಳೂರು ಶ್ರೀ ಮುರುಘಾ ಮಠದಲ್ಲಿರುವ ಸಂತ್ರಸ್ತರ ಪರಿಹಾರ ಕೇಂದ್ರಕ್ಕೆ ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ ಭೇಟಿ ನೀಡಿ ಕೇಂದ್ರದಲ್ಲಿರುವವರಿಗೆ ಸಾಂತ್ವನ ನುಡಿದರು.

ಇದರೊಂದಿಗೆ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಭೇಟಿ ನೀಡಿ ಸಂತ್ರಸ್ತರ ಕೇಂದ್ರದಲ್ಲಿರುವ ವಿದ್ಯಾರ್ಥಿಗಳು ಶಾಲೆಗಳಿಗೆ ತೆರಳಲು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡಿದೆ. ಪಟ್ಟಣಗಳಲ್ಲಿರುವ ಹಾಸ್ಟೆಲ್‍ಗಳಲ್ಲಿ ವಿದ್ಯಾರ್ಥಿಗಳು ದಾಖಲಾಗುವದಕ್ಕೆ ಶಿಕ್ಷಣ ಇಲಾಖೆ ವ್ಯವಸ್ಥೆ ಕಲ್ಪಿಸಿದೆ ಎಂದರು.

ಈ ಸಂದರ್ಭ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಸ್. ಮಹೇಶ್, ಮಠದ ವ್ಯವಸ್ಥಾಪಕ ಶಶಿಧರ್, ಪ್ರಮುಖರಾದ ಶ್ರೀಕಂಠ, ಕೆ.ಜಿ. ಸುರೇಶ್, ಡಿ.ಬಿ. ಸೋಮಪ್ಪ, ಬಸವಣ್ಣ ಇದ್ದರು.