ಮಡಿಕೇರಿ, ಜು. 31: ದಾಂಡೇಲಿ ನಗರ ಸಭೆಯ ಮಾಜಿ ಸದಸ್ಯ ಹಾಗೂ ಹಿರಿಯ ವಕೀಲ ಅಜಿತ್ ನಾಯ್ಕ್ ಅವರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿ ಕೊಲೆ ಗೈದಿರುವದನ್ನು ಖಂಡಿಸಿ ಮಡಿಕೇರಿ ವಕೀಲರ ಸಂಘ ಇಂದು ಕಲಾಪ ಬಹಿಸ್ಕರಿಸಿ ಪ್ರತಿಭಟನೆ ನಡೆಸಿತು.

ಈ ಸಂದರ್ಭದಲ್ಲಿ ವಕೀಲ ಸಂಘದ ಅಧ್ಯಕ್ಷ ಕೆ.ಎಸ್. ಕವನ್, ಉಪಾಧ್ಯಕ್ಷ ಪಿ.ಯು. ಪ್ರೀತಮ್, ಜಂಟಿ ಕಾರ್ಯದರ್ಶಿ ಡಿ.ಎಂ. ಕೇಶವ್, ಖಜಾಂಚಿ ಬಿ.ಸಿ. ದೇವಿ ಪ್ರಸಾದ್, ನಿರ್ದೇಶಕರಾದ ಎಂ. ಜ್ಯೋತಿ ಶಂಕರ್, ಎಂ.ಕೆ. ಅರುಣ್ ಕುಮಾರ್, ಜೆ. ಜೆನಿತ ಇಮ್ಯಾಕುಲೇಟ್, ಪಿ.ಟಿ. ಭಾನು ಪ್ರಕಾಶ್, ಪಿ.ಆರ್. ಚಂದನ್, ಎಂ.ಜಿ. ಮುದ್ದಯ್ಯ, ಡಿ.ಕೆ. ರಾಜೇಶ್, ಪಿ.ಬಿ. ದಿವ್ಯ ಮತ್ತು ವಕೀಲರ ಸಂಘದ ಹಿರಿಯ ಮತ್ತು ಕಿರಿಯ ವಕೀಲರುಗಳು ಹಾಜರಿದ್ದರು.