ಮಡಿಕೇರಿ, ಜು. 18: ಕುಶಾಲನಗರ ರೋಟರಿ ಇವರ ವತಿಯಿಂದ ಉಚಿತ ಕೃತಕ ಕಾಲು ಜೋಡಣೆ ಸಂಬಂಧ ಅಳತೆ ತೆಗೆಯುವ ಶಿಬಿರ ತಾ. 22 ರಂದು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ಕುಶಾಲನಗರದ ರೋಟರಿ ಭವನದಲ್ಲಿ ನಡೆಯಲಿದೆ.

ಕೃತಕ ಕಾಲುಗಳ ಅವಶ್ಯಕತೆ ಇರುವವರು ಈ ಶಿಬಿರಕ್ಕೆ ಹಾಜರಾಗಿ ತಮ್ಮ ಕಾಲುಗಳ ಅಳತೆ ನೀಡಬಹು ದಾಗಿದೆ. ಅಳತೆ ಪಡೆದುಕೊಂಡ ಅರ್ಹ ವಿಕಲಚೇತನರಿಗೆ ಆಗಸ್ಟ್ 15 ರಂದು ಸೌಲಭ್ಯ ವಿತರಿಸಲಾಗುವದು. ಈ ಶಿಬಿರದಲ್ಲಿ ಪಾಲ್ಗೊಳ್ಳುವ ವಿಕಲಚೇತನರು ಶೇ. 40 ಹಾಗೂ ಅದಕ್ಕೂ ಹೆಚ್ಚು ಅಂಗವಿಕಲತೆ ಇರುವ ಬಗ್ಗೆ ಗುರುತಿನ ಚೀಟಿ ಹೊಂದಿರಬೇಕು. ಜಿಲ್ಲೆಯ ಕೃತಕ ಕಾಲಿನ ಅವಶ್ಯಕತೆ ಇರುವ ವಿಕಲಚೇತನರು ಈ ಶಿಬಿರದ ಸೌಲಭ್ಯವನ್ನು ಪಡೆದುಕೊಳ್ಳುವಂತೆ ಕೋರಿದೆ. ಹೆಚ್ಚಿನ ಮಾಹಿತಿಗೆ ವಿಕಲಚೇತನರ ಸಹಾಯವಾಣಿ ಸಂಖ್ಯೆ: 08272-222830 ಹಾಗೂ 08272-222829 ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ದೇವರಾಜು ತಿಳಿಸಿದ್ದಾರೆ.