ಮಡಿಕೇರಿ, ಜು. 17 : ಕೊಡಗು ಜಿಲ್ಲಾ ಬಿಜೆಪಿ ಯುವ ಮೋರ್ಚಾ ವತಿಯಿಂದ ಪ್ರಕೃತಿ ವಿಕೋಪ, ಮಳೆ - ಗಾಳಿಯಿಂದ ನಾಡಿನ ಜನ - ಜಾನುವಾರುಗಳಿಗೆ ಯಾವದೇ ತೊಂದರೆಯಾಗದಂತೆ ಪ್ರಾರ್ಥಿಸುವ ಸಲುವಾಗಿ ತಾ. 18ರಂದು (ಇಂದು) ಬೆಳಿಗ್ಗೆ ತಲಕಾವೇರಿಯಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗಿದೆ ಎಂದು ಅಧ್ಯಕ್ಷ ಕಾಳನ ರವಿ ತಿಳಿಸಿದ್ದಾರೆ.