ಸುಂಟಿಕೊಪ್ಪ, ಜು. 12: ಸುಂಟಿಕೊಪ್ಪ ವರ್ಕ್‍ಶಾಪ್ ಮಾಲೀಕರ ಸಂಘದ 18ನೇ ಮಹಾ ಸಭೆ ಮಾದಾಪುರ ರಸ್ತೆಯ ಸ್ವಾಮಿ ಇಂಜಿನಿಯರ್ ವರ್ಕ್‍ಶಾಪ್‍ನ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ವಿ.ಎ. ಸಂತೋಷ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು.

ಅಧ್ಯಕ್ಷತೆ ವಹಿಸಿದ್ದ ವಿ.ಎ. ಸಂತೋಷ್ ಮಾತನಾಡಿ, ವರ್ಕ್‍ಶಾಪ್ ನಡೆಸುವವರು ಸ್ವಚ್ಛತೆಗೆ ಆದ್ಯತೆ ನೀಡಬೇಕು. ಪರಿಸರ ಸಂರಕ್ಷಣೆಯಲ್ಲಿ ಕಾಳಜಿ ವಹಿಸುವ ಮೂಲಕ ಇತರರಿಗೆ ಮಾದರಿ ಯಾಗಬೇಕು. ಇದರಿಂದ ಸಮಾಜದಲ್ಲಿ ಎಲ್ಲರೂ ಆರೋಗ್ಯವಂತರಾಗಿ ಜೀವನ ಸಾಗಿಸಲು ಸಹಕಾರ ನೀಡಿದಂತಾ ಗುತ್ತದೆ. ತಮ್ಮ ವರ್ಕ್‍ಶಾಪ್‍ಗಳ ಪರವಾನಿಗೆಯನ್ನು ಕಾಲ ಕಾಲಕ್ಕೆ ನವೀಕರಿಸಬೇಕು ಎಂದು ಕರೆ ನೀಡಿದರು. ಮಹಾಸಭೆಯ ನಂತರ ನೂತನ ಆಡಳಿತ ಮಂಡಳಿ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

ನೂತನ ಅಧ್ಯಕ್ಷರಾಗಿ ವಿ.ಎ. ಸಂತೋಷ್ ಅವಿರೋಧವಾಗಿ ಆಯ್ಕೆ ಆದರು. ಉಪಾಧ್ಯಕ್ಷರಾಗಿ ಕೆ. ಅನೀಶ್, ಪ್ರಧಾನ ಕಾರ್ಯದರ್ಶಿಯಾಗಿ ಬಿ.ಎಸ್. ರಮೇಶ್, ಸಹ ಕಾರ್ಯದರ್ಶಿಯಾಗಿ ಹೂವೇಗೌಡ, ಸಂಘಟನಾ ಕಾರ್ಯದರ್ಶಿಯಾಗಿ ತಂಗವೇಲು, ಆಡಳಿತ ಮಂಡಳಿ ನಿರ್ದೇಶಕರಾಗಿ ಪಿ.ಆರ್. ಸುನೀಲ್ ಕುಮಾರ್, ಕೆ. ಸತೀಶ್, ಅಬ್ದುಲ್ ರಜಾಕ್, ಆರ್. ಸತೀಶ್, ಉದಯ ಕುಮಾರ್, ಕೆ.ಜಿ. ಸತೀಶ್, ಕೆ. ಸುರೇಶ್ ಆಯ್ಕೆಯಾದರು. ಈ ಸಂದರ್ಭ ಸಂಘದ ಗೌರವ ಅಧ್ಯಕ್ಷ ಹೆಚ್. ಗಂಗಾಧರ್, ಸದಸ್ಯರು ಪದಾಧಿಕಾರಿಗಳು ಉಪಸ್ಥಿತರಿದ್ದರು.