ಸೋಮವಾರಪೇಟೆ,ಜು.12: ಜೈ ಜವಾನ್ ಮಾಜಿ ಸೈನಿಕರ ಸಂಘದ ಸಂತೋಷ ಕೂಟ ತಾ. 15ರಂದು ಪೂರ್ವಾಹ್ನ 10.30ಕ್ಕೆ ಇಲ್ಲಿನ ಕೊಡವ ಸಮಾಜದಲ್ಲಿ ನಡೆಯಲಿದೆ ಎಂದು ಸಂಘದ ಕಾರ್ಯದರ್ಶಿ ಆರ್.ಜಿ. ಬಸಪ್ಪ ತಿಳಿಸಿದ್ದಾರೆ.

ಕಾರ್ಯಕ್ರಮವನ್ನು ನಿವೃತ್ತ ಕರ್ನಲ್ ಬಿ.ಕೆ. ಅಣ್ಣಯ್ಯ ಮತ್ತು ನಿವೃತ್ತ ಮೇಜರ್ ಎಂ.ಕೆ. ಮಂದಪ್ಪ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಬಿ.ಆರ್. ಈರಪ್ಪ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಅಪ್ಪಚ್ಚು ರಂಜನ್, ಕೊಡಗು ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ ನಿವೃತ್ತ ಮೇಜರ್ ಜನರಲ್ ಬಿ.ಎ. ಕಾರ್ಯಪ್ಪ, ಇ.ಸಿ.ಎಚ್.ಎಸ್. ನಿರ್ದೇಶಕ ನಿವೃತ್ತ ಕರ್ನಲ್ ಪಿ.ಬಿ. ಅಯ್ಯಪ್ಪ, ಜಿಲ್ಲಾ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಜಂಟಿ ನಿರ್ದೇಶಕರಾದ ಲೆ. ಕರ್ನಲ್ ಗೀತಾ ಎಂ.ಶೆಟ್ಟಿ, ಕೊಡಗು ಜಿಲ್ಲಾ ಮಾಜಿ ಸೈನಿಕರ ಸಂಘದ ಕಾರ್ಯದರ್ಶಿ ನಿವೃತ್ತ ಮೇಜರ್ ಓ.ಎಸ್. ಚಿಂಗಪ್ಪ, ತಹಶೀಲ್ದಾರ್ ಪಿ.ಎಸ್. ಮಹೇಶ್, ತಾ.ಪಂ. ಉಪಾಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್, ಪ.ಪಂ. ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್ ಮತ್ತಿತರರು ಭಾಗವಹಿಸಲಿದ್ದಾರೆ.

ಇದೇ ಸಂದರ್ಭ ನಿವೃತ್ತ ಕರ್ನಲ್ ಬಿ.ಕೆ. ಅಣ್ಣಯ್ಯ, ಬಿ.ಟಿ. ಕುಶಾಲಪ್ಪ, ಕ್ಯಾಪ್ಟನ್ ಸುಬೇದಾರ್ ಮೇಜರ್ ಎ.ಪಿ. ಸುಬ್ಬಯ್ಯ, ಬಿ.ಎಸ್. ಕುಂಜಪ್ಪ ಮತ್ತು ಎಚ್.ಎಂ. ಗಂಗಾಧರ್ ಅವರನ್ನು ಸನ್ಮಾನಿಸಲಾಗುವದು ಎಂದು ಬಸಪ್ಪ ತಿಳಿಸಿದ್ದಾರೆ.