ಮಡಿಕೇರಿ, ಜು. 8: ಪೊಲೀಸ್ ಇಲಾಖೆಯಲ್ಲಿ ಹಲವು ವರ್ಷಗಳ ಸೇವೆ ಸಲ್ಲಿಸಿ ನಿವೃತ್ತರಾದ ಎ.ಎಸ್.ಐ.ಗಳಾದ ಕಾವೇರಪ್ಪ, ದೇವಯ್ಯ, ಗಂಗಾಧರ್ ರೈ, ವಿಶ್ವನಾಥ್ ಹಾಗೂ ರಾಜ್‍ಕುಮಾರ್ ಅವರುಗಳಿಗೆ ಡಿ.ಎ.ಆರ್. ವತಿಯಿಂದ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿತ್ತು.

ನಗರದ ಡಿ.ಎ.ಆರ್.ನಲ್ಲಿ ನಡೆದ ಸಮಾರಂಭದಲ್ಲಿ ನಿಸ್ತಂತು ವಿಭಾಗದ ಇನ್ಸ್‍ಪೆಕ್ಟರ್ ಮಹದೇವ, ಆರ್.ಪಿ.ಐ. ತಿಮ್ಮಪ್ಪಗೌಡ, ಆರ್.ಎಸ್.ಐ.ಗಳಾದ ಮಹೇಶ್ ಹಾಗೂ ವಿರೂಪಾಕ್ಷ ಅವರುಗಳು ನಿವೃತ್ತರನ್ನು ಸನ್ಮಾನಿಸಿದರು. ಈ ಸಂದರ್ಭ ಡಿ.ಎ.ಆರ್.ನ ಇತರ ಸಿಬ್ಬಂದಿಗಳು ಹಾಜರಿದ್ದರು.