ಗೋಣಿಕೊಪ್ಪಲು, ಜು. 8: ಇಂಡಿಯನ್ ಸೀನಿಯರ್ ಛೇಂಬರ್ ಸಂಸ್ಥೆ ಗೋಣಿಕೊಪ್ಪಲು ಘಟಕದ ವತಿಯಿಂದ ಬಲ್ಯಮುಂಡೂರು ¸ರಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣೆ ಮಾಡಲಾಯಿತು. ಲೇಖನಿ ಸಾಮಗ್ರಿಗಳು, ವಿದ್ಯಾರ್ಥಿಗಳಿಗೆ ಛತ್ರಿ ಮತ್ತು ಶಾಲೆಗೆ ಅಲ್ಮೇರಾವನ್ನು ಉಚಿತವಾಗಿ ನೀಡಲಾಯಿತು. ಶಾಲೆಯ ಆವರಣದಲ್ಲಿ ಹಣ್ಣು, ಹಂಪಲು ಗಿಡಗಳನ್ನು ನೆಡಲಾಯಿತು. ಹಾಗೂ ಅಂಗನವಾಡಿ ಕೇಂದ್ರಕ್ಕೆ ಚಾಪೆಗಳನ್ನು ಕೊಡಲಾಯಿತು. ಇಂಡಿಯನ್ ಸೀನಿಯರ್ ಛೇಂಬರ್‍ನ ಅಧ್ಯಕ್ಷ ಮನ್ನಕ್ಕಮನೆ ಬಾಲಕೃಷ್ಣ, ಕಾರ್ಯದರ್ಶಿ ಮೂಕಳೇರ ದಿಲುಕುಮಾರ್, ಬಲ್ಯಮುಂಡೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೊಟ್ಟಂಗಡ ಪ್ರಕಾಶ್, ಸದಸ್ಯರಾದ ಅಂಥೋಣಿ ಜೋಸೆಫ್, ಟಿ.ಜೆ. ಅಂಥೋಣಿ, ದಾನಿಗಳಾದ ಚೆರಿಯಂಡ ಶರತ್, ಕೊಡಂದೇರ ಪ್ರವೀಣ್ ಹಾಗೂ ಎಸ್‍ಡಿಎಂಸಿ ಅಧ್ಯಕ್ಷ ಲಕ್ಷ್ಮಣ, ಮುಖ್ಯೋಪಾಧ್ಯಾಯಿನಿ ಮಾನಸ ಹಾಜರಿದ್ದರು.