ಸೋಮವಾರಪೇಟೆ, ಜು 1: ವಿಷಕಾರಿ ಹಾವು ಕಚ್ಚಿ ಹೆಚ್. ಡಿ. ಕೋಟೆಯಲ್ಲಿ ತಾಲೂಕಿನ ಕೂಲಿ ಕಾರ್ಮಿಕ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೊನ್ನೆಯಷ್ಟೇ ಕೆಲಸಕ್ಕೆ ತೆರಳಿದ್ದ ಸೋಮವಾರಪೇಟೆ ಸಮೀಪದ ಹಾನಗಲ್ಲು ಬಾಣೆ &divound;ವಾಸಿ ಸುರೇಶ್ (36) ಎಂಬವರೇ ಸಾವನ್ನಪ್ಪಿದವರು. ಹಾನಗಲ್ಲು ಬಾಣೆಯ ಕೂಲಿ ಕಾರ್ಮಿಕ ಸುರೇಶ್ ಅವರು ಜೂ. 29ರಂದು ಹೆಚ್ ಡಿ ಕೋಟೆಯಲ್ಲಿ ಮನೆ &divound;ರ್ಮಾಣ ಕೆಲಸಕ್ಕೆಂದು ತೆರಳಿದ್ದು, ಸಂಜೆ ವೇಳೆಯಲ್ಲಿ ವಿಷಕಾರಿ ಹಾವು ಕಚ್ಚಿದೆ. ತಕ್ಷಣ ಸಹಕಾರ್ಮಿಕರು ಹೆಚ್. ಡಿ. ಕೋಟೆ ಅಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್ . ಆಸ್ಪತ್ರೆಗೆ ಸಾಗಿಸಲಾಗಿದ್ದು, ಪರೀಕ್ಷಿಸಿದ ವೈದ್ಯರು ಅದಾಗಲೇ ಮೃತಪಟ್ಟಿರುವ ಬಗ್ಗೆ ಖಚಿತಪಡಿಸಿದ್ದಾರೆ. ಮೃತ ಸುರೇಶ್ ಅವರು ಪತ್ನಿ ಲಕ್ಷ್ಮೀ ಸೇರಿದಂತೆ ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಹಾನಗಲ್ಲು ಬಾಣೆ ರುದ್ರಭೂಮಿಯಲ್ಲಿ ನೆರವೇರಿದೆ. ಹೆಚ್ ಡಿ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.