ವೀರಾಜಪೇಟೆ, ಜು. 2: ವೀರಾಜಪೇಟೆ ಅರಣ್ಯ ವಲಯದ ಮಗ್ಗುಲ, ಬಿಟ್ಟಂಗಾಲ, ಕೊಳತ್ತೋಡು ಬೈಗೋಡು, ನಲ್ವತ್ತೊಕ್ಕಲು, ಐಮಂಗಲ ಹೊಸಕೋಟೆ ಹಾಗೂ ಹೊಸೂರು ಗ್ರಾಮಗಳಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವ ಕಾರ್ಯಾಚರಣೆಯನ್ನು ತಾ. 4ರಂದು ನಡೆಯಲಿದೆ. ಗ್ರಾಮಸ್ಥರು, ಶಾಲಾ ಮಕ್ಕಳು, ಕೂಲಿ ಕಾರ್ಮಿಕರು, ಆ ದಿನ ಎಚ್ಚರಿಕೆಯಿಂದ ಇದ್ದು ಕಾರ್ಯಾಚ ರಣೆಗೆ ಸಹಕರಿಸಬೇಕೆಂದು ಉಪ ವಲಯ ಅರಣ್ಯಾಧಿಕಾರಿ ಸುಬ್ರಾಯ ಕೋರಿದ್ದಾರೆ.