ಗೋಣಿಕೊಪ್ಪ ವರದಿ, ಜೂ. 25: ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯವನ್ನು ಖಾಸಗಿ ಕಾಲೇಜು ಮಾಡಲು ಮುಂದಾಗಿರುವದನ್ನು ವಿರೋಧಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಪ್ರಸ್ತುತ ಕಾಲೇಜಿಗೆ ಉತ್ತಮ ಅನುದಾನ ಸೇರಿದಂತೆ ಅಭಿವೃದ್ದಿಗೆ ಪೂರಕವಾಗಿ ನಡೆಯುತ್ತಿದ್ದು, ಇದನ್ನು ಖಾಸಗಿಗೆ ನೀಡಬಾರದು ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು.

ಕಾಲೇಜು ಎದುರು ಜಮಾಯಿಸಿದ ವಿದ್ಯಾರ್ಥಿಗಳು ಖಾಸಗಿಗೆ ನೀಡದಂತೆ ಒತ್ತಾಯಿಸಿದರು. ಖಾಸಗಿಗೆ ನೀಡಿದರೆ ಉದ್ಯೋಗ ಸಮಸ್ಯೆ ಉಂಟಾಗುತ್ತದೆ. ಅಲ್ಲದೆ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆ. ಪ್ರತಿಭೆಗಳು ಹಣದ ಆಮಿಷಕ್ಕೆ ಒಳಗಾಗುವದರಿಂದ ಉದ್ಯೋಗ ಕಳೆದುಕೊಳ್ಳಬೇಕಾಗುತ್ತದೆ. ಮೀಸಲಾತಿ ಇರುವವರಿಗೆ ಮಾತ್ರ ಉದ್ಯೋಗ ಸಿಗುತ್ತದೆ. ಉದ್ಯೋಗದ ಅವಶ್ಯಕತೆ ಇರುವವರಿಗೆ ಸಿಗುವದಿಲ್ಲ. ಸರ್ಕಾರಿ ಸೀಟುಗಳು ಹಣಕ್ಕಾಗಿ ಮಾರಾಟವಾಗುತ್ತದೆ, ಕೃಷಿ ಕಾಲೇಜುಗಳು ನಾಯಿಕೊಡೆಗಳಂತೆ ತಲೆ ಎತ್ತುವದರಿಂದ ಗುಣಮಟ್ಟದ ಶಿಕ್ಷಣ ಇರುವದಿಲ್ಲ. ಸರ್ಕಾರಿ ಕಾಲೇಜುಗಳಿಗೆ ಹಾಗೂ ಸರ್ಕಾರಿ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳಿಗೆ ಮಾನ್ಯತೆ ಸಿಗುವದಿಲ್ಲ

ಮೀಸಲಾತಿ ಇರುವವರಿಗೆ ಮಾತ್ರ ಉದ್ಯೋಗ ಸಿಗುತ್ತದೆ. ಉದ್ಯೋಗದ ಅವಶ್ಯಕತೆ ಇರುವವರಿಗೆ ಸಿಗುವದಿಲ್ಲ. ಸರ್ಕಾರಿ ಸೀಟುಗಳು ಹಣಕ್ಕಾಗಿ ಮಾರಾಟವಾಗುತ್ತದೆ, ಕೃಷಿ ಕಾಲೇಜುಗಳು ನಾಯಿಕೊಡೆಗಳಂತೆ ತಲೆ ಎತ್ತುವದರಿಂದ ಗುಣಮಟ್ಟದ ಶಿಕ್ಷಣ ಇರುವದಿಲ್ಲ. ಸರ್ಕಾರಿ ಕಾಲೇಜುಗಳಿಗೆ ಹಾಗೂ ಸರ್ಕಾರಿ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳಿಗೆ ಮಾನ್ಯತೆ ಸಿಗುವದಿಲ್ಲ