ವೀರಾಜಪೇಟೆ, ಮೇ 28: ಕುಂಜಲಗೇರಿ ಗ್ರಾಮದ ಶ್ರೀ ಈಶ್ವರ ಬೊಟ್ಲಪ್ಪ ದೇವಸ್ಥಾನದ ಜೀರ್ಣೋದ್ಧಾರ ಪೂರ್ಣ ಗೊಂಡಿದ್ದು, ಈ ಪ್ರಯುಕ್ತ ತಾ. 29, 30, 31 ರಂದು ವಿಶೇಷ ಪೂಜೆ, ಹೋಮ, ಬ್ರಹ್ಮಕಲಶೋತ್ಸವ, ಬಿಂಬಪ್ರತಿಷ್ಠಾಪನೆ ಹಾಗೂ ಇತರ ಶಾಸ್ತ್ರೋಕ್ತ ಕೈಂಕರ್ಯವು ಶ್ರೀ ಕುಟೀರ ನಂಬುದರಿಪಾಡ್ ತಂತ್ರಿ, ಕಳಿಪರಂಬು ಇವರ ನೇತೃತ್ವದಲ್ಲಿ ನಡೆಯುತ್ತ ದೆಂಬದು ಊರಿನ ಯೂನಿಯನ್ ಸಂಘ ಹಾಗೂ ಈಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯವರು ತಿಳಿಸಿದ್ದಾರೆ. ತಾ. 30, 31 ರಂದು ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.