ಮಡಿಕೇರಿ, ಮೇ 29: ಮುಂಬೈನಲ್ಲಿದ್ದ ಮಡಿಕೇರಿ ಮೂಲದ ಚಂದ್ರಶೇಖರ್ ರಾವ್ ಮೆಮೋರಿಯಲ್ ಟ್ರಸ್ಟ್ ಶಾಖೆಯನ್ನು ನಗರದಲ್ಲಿ ಉದ್ಘಾಟಿಸಲಾಗಿದ್ದು, ಬಡ ವಿದ್ಯಾರ್ಥಿ ಫಲಾನುಭವಿಗಳಿಗೆ ಆರ್ಥಿಕ ನೆರವು ವಿತರಿಸಲಾಯಿತು.
ನಗರದ ಶೇಖರ್ ಕಾಂಪ್ಲೆಕ್ಸ್ನಲ್ಲಿ ಪ್ರಾರಂಭಗೊಂಡ ಮುಂಬೈನ ಚಂದ್ರಶೇಖರ ರಾವ್ ಮೆಮೋರಿಯಲ್ ಟ್ರಸ್ಟ್ ವತಿಯಿಂದ ವಿದ್ಯಾರ್ಥಿ ವೇತನ, ವಿಧವಾ ವೇತನ, ವೈದ್ಯಕೀಯ ನೆರವು, ವಿವಾಹ ಕಾರ್ಯ ಸೇರಿದಂತೆ ಹಲವರಿಗೆ ಆರ್ಥಿಕ ನೆರವು ವಿತರಿಸಲಾಯಿತು. ಅಂತೆಯೇ ಜ್ಞಾನದೀಪ ದೈವಜ್ಞ ಮಹಿಳಾ ಸಂಘಕ್ಕೆ 5 ಸಾವಿರ ರೂಪಾಯಿಗಳ ನೆರವು ಹಾಗೂ ದೈವಜ್ಞ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನವನ್ನು ಟ್ರಸ್ಟ್ ವತಿಯಿಂದ ನೀಡಲಾಯಿತು. ನಗರದ ಶೇಖರ್ ಜ್ಯುವೆಲ್ಲರಿ ಮಾಲೀಕ ಎಸ್.ಎಂ. ಈಶ್ವರ್ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ ದರು. ಟ್ರಸ್ಟ್ ಅಧ್ಯಕ್ಷೆ ಶ್ರೀದೇವಿ ಸಿ. ರಾವ್ ಮಾತನಾಡಿ, ಸಮಾಜ ಸೇವೆಯನ್ನೇ ಜೀವನದ ದ್ಯೇಯೋದ್ದೇಶ ವಾಗಿರಿಸಿ ಕೊಂಡಿದ್ದ ಚಂದ್ರಶೇಖರ್ ರಾವ್ ನೆನಪಿನಲ್ಲಿ ಟ್ರಸ್ಟ್ ಮುಂಬೈನಲ್ಲಿ ಮೊದಲು ಪ್ರಾರಂಭವಾಗಿದ್ದು, ಇದೀಗ ಚಂದ್ರಶೇಖರ ರಾವ್ ಹುಟ್ಟೂರಾದ ಮಡಿಕೇರಿಯಲ್ಲಿಯೂ ಟ್ರಸ್ಟ್ನ ಶಾಖೆ ಪ್ರಾರಂಭಿಸಲಾಗುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಬಿ.ಎಸ್. ಮೋಹನ್, ಶುಭಾ ವಿಶ್ವನಾಥ್, ಸಂಸ್ಥೆಯ ಉಪಾಧ್ಯಕ್ಷ ಎಂ.ಎನ್. ಪ್ರತಾಪ್, ಕಾರ್ಯದರ್ಶಿ ಎಂ.ಎನ್. ಸಚಿನ್, ಖಚಾಂಚಿ ಎಂ.ಎ. ಅಂಜನ್ ಕುಮಾರ್, ಅನಿತಾ ಪ್ರತಾಪ್ ಶೇಟ್, ವಸುಧಾ, ದೈವಜ್ಞ ಸಮಾಜದ ಸದಸ್ಯರು ಪಾಲ್ಗೊಂಡಿದ್ದರು. ಅಖಿಲಾ ಎಂ.ಎ. ಕಾರ್ಯಕ್ರಮ ನಿರೂಪಿಸಿದರು.