ಮಡಿಕೇರಿ, ಏ. 10: ಮಡಿಕೇರಿಯ ಶ್ರೀ ಮುತ್ತಪ್ಪ ದೇವಾಲಯ ಜಾತ್ರೆಯ ಅಂಗವಾಗಿ ಮಹದೇವಪೇಟೆಯ ಚೌಕಿಯಿಂದ ಮುತ್ತಪ್ಪ ದೇವಾಲಯದವರೆಗೆ ದೇವಾಲಯದ ಕಲಶ ಮೆರವಣಿಗೆ ಬರುವ ರಾಜಬೀದಿಯಲ್ಲಿ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ನೂರಾರು ಮಹಿಳೆಯರು ತಮ್ಮ ತಮ್ಮ ಮನೆಯ ಮುಂದೆ ವರ್ಣರಂಜಿತ ರಂಗೋಲಿಗಳನ್ನು ಬಿಡಿಸಿದ್ದರು. ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದ ಐವರು ಮಹಿಳೆಯರಿಗೆ ಮತ್ತು ಜಾತ್ರೆಯ ಅಂಗವಾಗಿ ನಡೆದ ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದ ನಲವತ್ತು ಮಹಿಳೆಯರು ಮತ್ತು ಮಕ್ಕಳಿಗೆ ಚಿನ್ನದ ನಾಣ್ಯದ ಉಡುಗೊರೆಯನ್ನು ಶ್ರೀ ಮುತ್ತಪ್ಪ ದೇವಾಲಯ ಆವರಣದಲ್ಲಿ ನಡೆದ ಸಾಂಸ್ಕøತಿಕ ಸಮಾರಂಭದಲ್ಲಿ ಶಕ್ತಿ ದಿನಪತ್ರಿಕೆಯ ಸಂಪಾದಕ ಜಿ. ಚಿದ್ವಿಲಾಸ್ ಹಾಗೂ ಮಾತಾಜಿ ಗೋಲ್ಡ್ ಪ್ಯಾಲೇಸ್ನ ಮಾಲೀಕ ತೇಜ್ರಾಜ್ ವಿತರಿಸಿದರು.
ದೇವಾಲಯ ಸಮಿತಿಯ ಅಧ್ಯಕ್ಷ ಟಿ.ಕೆ. ಸುಧೀರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಮುತ್ತಪ್ಪ ಮಹಿಳಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಶಾರದಾ ರಾಮನ್ ಕಾರ್ಯಕ್ರಮ ನಿರೂಪಿಸಿದರು. ಮಹಿಳಾ ಸಮಿತಿಯ ಪದಾಧಿಕಾರಿಗಳು ಈ ಸಂದರ್ಭ ಹಾಜರಿದ್ದರು.
ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದ ಮಹದೇವಪೇಟೆಯ ನಿವಾಸಿಗಳಾದ ಸವಿತಾ ಅರುಣ್, ಶ್ರುತಿ, ಅನಿತಾ ವೆಂಕಟೇಶ್, ಸುಶ್ಮಾ ಅರುಣ್, ವಸಂತಿಕುಮಾರಿ ಇವರು ಬಹುಮಾನ ಸ್ವೀಕರಿಸಿದರು. ಈ ಸಂದರ್ಭ ಮೈಸೂರಿನ ವಯಲಿನ್ ವಾದಕರಾದ ಮಂಜುನಾಥ್, ಕಲಾವಿದ ಜಿ. ಚಿದ್ವಿಲಾಸ್ ಹಾಗೂ ದೇವಾಲಯದ ಹಿತಚಿಂತಕರಾದ ತೇಜ್ರಾಜ್ ಕುಟುಂಬದವರನ್ನು ಸನ್ಮಾನಿಸಲಾಯಿತು.