ಕೂಡಿಗೆ, ಏ. 2: ಕೂಡಿಗೆ ಸುತ್ತ-ಮುತ್ತಲ ಪ್ರದೇಶದಲ್ಲಿ ಇಂದು ಭಾರೀ ಗಾಳಿ-ಮಳೆಯಾಗಿದ್ದು, ಭಾರೀ ಗಾತ್ರದ ಮರ ಉರುಳಿ ಬಿದ್ದ ಪರಿಣಾಮ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಹೆಬ್ಬಾಲೆ-ಬಾಣಾವರ, ಸೋಮವಾರಪೇಟೆ ರಸ್ತೆಗಡ್ಡಲಾಗಿ ಸಿದ್ದಲಿಂಗಪುರ ಬಳಿ ಮರ ಉರುಳಿ ಬಿದ್ದಿದ್ದು, ತೆರವುಗೊಳಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಸಂಚಾರ ಸ್ಥಗಿತಗೊಂಡಿದೆ. ಇದೀಗ ಎಲ್ಲ ವಾಹನಗಳು ಕೂಡಿಗೆ ಮೂಲಕ ಸೋಮವಾರಪೇಟೆಗೆ ತೆರಳುವಂತಾಗಿದೆ.