ಮಡಿಕೇರಿ, ಏ. 2: ಜಿಲ್ಲೆಯ ಗಡಿಭಾಗ ಕಲ್ಲುಗುಂಡಿ ಸಮೀಪ ಗುತ್ತಿಗಾರನ ಮಣಿಕುಮಾರ್ ಎಂಬವರ ತೋಟದಲ್ಲಿ 14 ಅಡಿ ಉದ್ದದ ಕಾಳಿಂಗ ಸರ್ಪ ಪತ್ತೆಯಾಗಿದೆ.

ಜಾಲ್ಸೂರಿನ ಸ್ನೇಕ್ ಶ್ಯಾಮ್ ಪ್ರಸಾದ್ ಅವರು ಕಾಳಿಂಗ ಸರ್ಪವನ್ನು ಹಿಡಿದು ಪಿಲಿಕುಳ ನಿಸರ್ಗ ಧಾಮದ ಅರಣ್ಯ ಅಧಿಕಾರಿಗಳಿಗೆ ಹಸ್ತಾಂತರಿಸಿದರು.