ಮಡಿಕೇರಿ, ಏ. 2: ಜಿಲ್ಲೆಯ ನೂತನ ಉಪ ವಿಭಾಗಾಧಿಕಾರಿಯಾಗಿ ರಮೇಶ್ ಪಿ.ಕೊನರೆಡ್ಡಿ ಅಧಿಕಾರ ವಹಿಸಿಕೊಂಡಿದ್ದಾರೆ. ಕೊನರೆಡ್ಡಿ ಅವರು ಹಿಂದೆ ಧಾರವಾಡ ಜಿಲ್ಲೆಯ ನಗರಾಭಿವೃದ್ಧಿ ಕೋಶದಲ್ಲಿ ಯೋಜನಾ ನಿರ್ದೇಶಕರಾಗಿ, ಮುಂಡರಗಿ, ಹಾನಗಲ್, ಹೊಸಪೇಟೆ ಹಾಗೂ ಶಿಗ್ಗಾಂ ತಾಲೂಕುಗಳಲ್ಲಿ ತಹಶೀಲ್ದಾರರಾಗಿ ಸೇವೆ ಸಲ್ಲಿಸಿದ್ದಾರೆ.