ಮದೆನಾಡು: ಮದೆನಾಡುವಿನ ವಿಎಸ್‍ಎಸ್ ಸಂಘದ ಸಭಾಂಗಣದಲ್ಲಿ ತಾ. 22ರಂದು ಜೆಡಿಎಸ್ ಕಾರ್ಯಕರ್ತರ ಹಾಗೂ ಮುಖಂಡರ ಸಭೆ ಜರುಗಿತು.

ರಾಜ್ಯ ಪ್ರಧಾನ ಕಾರ್ಯದರ್ಶಿ ಹೊಸೂರು ಸತೀಶ್ ಜೋಯಪ್ಪ, ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಮಾತನಾಡಿದರು.

ಸಭೆಯ ಅಧ್ಯಕ್ಷತೆಯನ್ನು ಹುದೇರಿ ರಾಜೇಂದ್ರ ವಹಿಸಿದ್ದರು. ಕ್ಷೇತ್ರ ಅಧ್ಯಕ್ಷರಾದ ಎಂ.ಹೆಚ್.ಮತೀನ್, ಮುದ್ದಿಯನ ತಿಮ್ಮಯ್ಯ, ಮತ್ತಿತರರು ಹಾಜರಿದ್ದರು.ಸಿದ್ದಾಪುರ : ಚೆನ್ನಯ್ಯನಕೋಟೆಯಲ್ಲಿ ತಾ. 26ರಂದು ನಡೆದ ಮಾಲ್ದಾರೆ, ಚೆನ್ನಯ್ಯನಕೋಟೆ ವ್ಯಾಪ್ತಿಯ ಜೆ.ಡಿ.ಎಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಚೆನ್ನಯ್ಯನಕೋಟೆಯ ಪಕ್ಷದ ಅಧ್ಯಕ್ಷ ರಾಮಕೃಷ್ಣ ವಹಿಸಿದ್ದರು. ಈ ಸಂದರ್ಭ ವೀರಾಜಪೇಟೆ ಕ್ಷೇತ್ರದ ಅಧ್ಯಕ್ಷ ಎಸ್.ಹೆಚ್ ಮತೀನ್, ಪಕ್ಷದ ಮುಖಂಡರಾದ ದೇವರಾಜ್, ಜಯಮ್ಮ, ರಜಾಕ್, ಸೋಮಯ್ಯ, ರಾಜೇಶ್, ಡಾಲು, ಮುಸ್ತಫ ಸೇರಿದಂತೆ ಕಾರ್ಯಕರ್ತರು ಹಾಜರಿದ್ದರು.

ವೀರಾಜಪೇಟೆ: ಆರ್ಜಿ ಗ್ರಾಮದ ಮಹಿಳಾ ಸಮಾಜದ ಸಭಾಂಗಣದಲ್ಲಿ ತಾ. 27ರಂದು ಆರ್ಜಿ, ಬೇಟೋಳಿ, ಚಿಟ್ಟಡೆ ವ್ಯಾಪ್ತಿಯ ಜೆ.ಡಿ.ಎಸ್ ಕಾರ್ಯಕರ್ತರ ಸಭೆ ನಡೆಯಿತು.

ಸಭೆಯಲ್ಲಿ ಮಾತನಾಡಿದ ಜೆ.ಡಿ.ಎಸ್. ಮುಖಂಡ ಸಿ.ಎ. ನಾಸೀರ್, ಜೆ.ಡಿ.ಎಸ್. ಜಿಲ್ಲಾಧ್ಯಕ್ಷ ಹಾಗೂ ವೀರಾಜಪೇಟೆ ಕ್ಷೇತ್ರದ ಅಭ್ಯರ್ಥಿ ಸಂಕೇತ್ ಪೂವಯ್ಯ ಮಾತನಾಡಿದರು.

ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಎಸ್.ಹೆಚ್ ಮತೀನ್, ಪಕ್ಷದ ಮುಖಂಡರಾದ ಪಿ.ಎ. ಮಂಜುನಾಥ್, ಅಮ್ಮಂಡ ವಿವೇಕ್, ಸುಮಿತ್ರ, ವಿನೋದ್, ಅರಸ, ಅಯಾಜ್, ಮುತ್ತಪ್ಪ, ನೂರ್, ಸಿ.ಎ ನಾಸಿರ್ ಸೇರಿದಂತೆ ಇನ್ನಿತರರು ಹಾಜರಿದ್ದರು.ನೇಮಕ: ವೀರಾಜಪೇಟೆ ತಾಲೂಕು ಜೆಡಿಎಸ್ ಯುವ ಘಟಕದ ಉಪಾಧ್ಯಕ್ಷರಾಗಿ ಹಾಗೂ ಪೊನ್ನಂಪೇಟೆ ಬ್ಲಾಕ್‍ನ ಚುನಾವಣಾ ಉಸ್ತುವಾರಿಯಾಗಿ ಕೊಗೀಲವಾಡಿ ಕರಣ್ ಅವರನ್ನು ನೇಮಕಗೊಳಿಸಿರುವದಾಗಿ ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಯುವ ಜನತಾದಳದ ಅಧ್ಯಕ್ಷ ಅಮ್ಮಣ್ಣ ವಿವೇಕ್ ತಿಳಿಸಿದ್ದಾರೆ.

ಜೆಡಿಎಸ್‍ಗೆ ನೇಮಕ: ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಉಪಾಧ್ಯಕ್ಷರನ್ನಾಗಿ ಬೆಳ್ಳುಮಾಡು ಗ್ರಾ.ಪಂ.ಯ ಮಾಜಿ ಸದಸ್ಯ ಪಂದ್ಯಂಡ ರವಿ ಮಾದಪ್ಪ ಅವರನ್ನು ನೇಮಿಸಲಾಗಿದೆ.