ಮಡಿಕೇರಿ, ಮಾ. 25: ಕೊಡಗಿನಲ್ಲಿ ಈ ಹಿಂದೆ ಜಿಲ್ಲಾಧಿಕಾರಿ ಯಾಗಿ ಅನುರಾಗ್ ತಿವಾರಿ ಅವರ ಅಕಾಲಿಕ ಮರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖಾ ತಂಡ ನಗರದಲ್ಲಿ ಹಲವರ ವಿಚಾರಣೆ ನಡೆಸಿದೆ. ಅನುರಾಗ್ ತಿವಾರಿ ಅವರು ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ಅವರ ಆಪ್ತ ಸಹಾಯಕರು, ಗನ್‍ಮ್ಯಾನ್, ಚಾಲಕರು ಗಳು, ಕಚೇರಿ ಸಿಬ್ಬಂದಿಗಳನ್ನು ಸುದರ್ಶನ ಅತಿಥಿ ಗೃಹದಲ್ಲಿ ವಿಚಾರಣೆಗೊಳಪಡಿಸಿ ಸಿಬಿಐ ಅಧಿಕಾರಿಗಳು ಹಲವು ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ. ಕಳೆದೆರಡು ದಿನಗಳಿಂದ ನಗರದಲ್ಲಿ ಬೀಡು ಬಿಟ್ಟಿದ್ದ ಸಿಬಿಐ ತಂಡ ತನಿಖೆ ಪೂರ್ಣಗೊಳಿಸಿ ಇಂದು ಹಿಂತಿರುಗಿದೆ.