ವೀರಾಜಪೇಟೆ, ಮಾ. 9; ವೀರಾಜಪೇಟೆ ಬಳಿಯ ಕುಕ್ಲೂರು ಗ್ರಾಮದ ಮುತ್ತಪ್ಪ ದೇವಸ್ಥಾನದಲ್ಲಿ ತಾ. 14 ಮತ್ತು 15 ರಂದು ಮುತ್ತಪ್ಪ ತೆರೆ ಮಹೋತ್ಸವ ಜರುಗಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿಯ ಟಿ.ಆರ್. ಹರ್ಷ ತಿಳಿಸಿದ್ದಾರೆ.

ತಾ. 14 ರಂದು ಸಂಜೆ 6ಗಂಟೆಗೆ ಮುತ್ತಪ್ಪ ವೆಳ್ಳಾಟಂನೊಂದಿಗೆ ತೆರೆ ಮಹೋತ್ಸವಕ್ಕೆ ಚಾಲನೆ ದೊರೆಯಲಿದ್ದು, ರಾತ್ರಿ 7 ಗಂಟೆಗೆ ಶಾಸ್ತಪ್ಪ ವೆಳ್ಳಾಟಂ 9 ಗಂಟೆಗೆ ಗುಳಿಗ ವೆಳ್ಳಾಟಂ, ರಾತ್ರಿ 10 ಗಂಟೆಯಿಂದ ಬಸುರಿಮಲ ವೆಳ್ಳಾಟಂ ನಡೆಯಲಿದೆ.

ತಾ. 15 ರಂದು ಬೆಳಗಿನ ಜಾವ 4 ಗಂಟೆಗೆ ಗುಳಿಗನ ತೆರೆ, 5.30 ರಿಂದ ಮುತ್ತಪ್ಪನ್ ಹಾಗೂ ತಿರುವಪ್ಪನ್ ತೆರೆ, ಬೆಳಿಗ್ಗೆ 7 ಗಂಟೆಯಿಂದ ಶಾಸ್ತಪ್ಪನ್ ತೆರೆ, ಬೆಳಿಗ್ಗೆ 9 ಗಂಟೆಯಿಂದ ಕರಿಂಗುಟ್ಟಿ ಶಾಸ್ತಪ್ಪನ ವಿಶೇಷ ತೆರೆ, ಬೆಳಿಗ್ಗೆ 11 ಗಂಟೆಯಿಂದ ಬಸುರಿವiಲ ತೆರೆ ಏರ್ಪಡಿಸಲಾಗಿದೆ ಎಂದು ಹರ್ಷ ತಿಳಿಸಿದರು.

ತಾ. 14 ರಂದು ರಾತ್ರಿ 8.30 ಗಂಟೆಗೆ ಹಾಗೂ ತಾ. 15 ರಂದು ಮಧ್ಯಾಹ್ನ 12 ಗಂಟೆಗೆ ಅನ್ನಸಂತರ್ಪಣೆ ಕಾರ್ಯಕ್ರಮವಿದೆ. ಪ್ರತಿ ತಿಂಗಳ ತಾ. 15 ರಂದು ದೇವಾಲಯದಲ್ಲಿ ವಿಶೇಷ ಪೂಜೆ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮವಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.